HEALTH TIPS

ಕೆ-ಸ್ವಿಫ್ಟ್ ಆರಂಭದಲ್ಲೇ ವಿಘ್ನ: ಇಂದು ಎರಡು ಬಸ್ ಗಳಿಗೆ ಅಪಘಾತ: ಕೆಎಸ್‍ಆರ್‍ಟಿಸಿ ಎಂಡಿಯಿಂದ ಅನುಮಾನದ ಆರೋಪ

                    ತಿರುವನಂತಪುರಂ: ನಿನ್ನೆಯಷ್ಟೇ ಭಾರೀ ಆಶೋತ್ತರಗಳ ಕನಸಿನೊಂದಿಗೆ ಆರಂಭಗೊಂಡ ಕೆ-ಸ್ವಿಫ್ಟ್ ಬಸ್ ಎರಡು ಬಾರಿ  ಅಪಘಾತಕ್ಕೀಡಾಗಿದೆ. ಕೋಝಿಕ್ಕೋಡ್‍ನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಬಸ್  ಅಪಘಾತಕ್ಕೀಡಾಗಿದೆ. ಮಲಪ್ಪುರಂ ಚಂಕುವೆಟ್ಟಿಯಲ್ಲಿ ಈ ದುರ್ಘಟನೆ ನಡೆದಿದೆ. 24 ಗಂಟೆಗಳಲ್ಲಿ ಇದು ಎರಡನೇ ಬಾರಿಗೆ ಬಸ್ ಅಪಘಾತಕ್ಕೀಡಾಗಿದೆ. ಆರಂಭದಲ್ಲಿ, ತಿರುವನಂತಪುರಂನ ಕಲ್ಲಂಬಳಂ ಬಳಿ ಬಸ್ ಅಪಘಾತಕ್ಕೀಡಾಗಿತ್ತು.

                   ಮಲಪ್ಪುರಂನಲ್ಲಿ ಸ್ವಿಫ್ಟ್ ಬಸ್ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗದಿದ್ದರೂ, ಬಸ್ಸಿನ ಬಣ್ಣಕ್ಕೆ ಕೆಡುಕಾಗಿದೆ.  ಹಿಂಬದಿಯ ಬ್ರೇಕ್ ಲೈಟ್ ಕೂಡ ಹಾಳಾಗಿದೆ. ಕೆಎಸ್‍ಆರ್‍ಟಿಸಿ ಲೇಲ್ಯಾಂಡ್ ಬಸ್ ಡಿಕ್ಕಿ ಹೊಡೆದು ಕಲ್ಲಂಬಳಂ ಬಳಿ ಮೊದಲ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ನ 35,000 ರೂ.ಮೌಲ್ಯದ ಸೈಡ್ ಮಿರರ್ ಹಾನಿಯಾಗಿದೆ. ಬದಲಿಗೆ ಕೆಎಸ್‍ಆರ್‍ಟಿಸಿಯ ವರ್ಕ್‍ಶಾಪ್‍ನಿಂದ ಮತ್ತೊಂದು ಸೈಡ್ ಮಿರರ್ ಅಳವಡಿಸಿ ಪ್ರಯಾಣ ಮುಂದುವರಿಸಿತು.



            ಇದೇ ವೇಳೆ ಸ್ಥಳಕ್ಕಾಗಮಿಸಿದ ಕೆಎಸ್‍ಆರ್‍ಟಿಸಿ ಎಂಡಿ, ಚೊಚ್ಚಲ ಪ್ರಯಾಣದ ವೇಳೆ ಬಸ್‍ಗಳು ಅಪಘಾತಕ್ಕೀಡಾಗಿರುವ ಘಟನೆಯ ಹಿಂದೆ ಶಂಕೆ ಇದೆ ಎಂದು ಆರೋಪಿಸಿದರು. ಅಪಘಾತದ ಹಿಂದೆ ಖಾಸಗಿ ಬಸ್ ಲಾಬಿ ಕೈವಾಡವಿದೆ ಎಂದು ಕೆಎಸ್‍ಆರ್‍ಟಿಸಿ ಎಂಡಿ ಬಿಜು ಪ್ರಭಾಕರ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿಗೆ ದೂರು ಸಲ್ಲಿಸಿದ್ದಾರೆ.

                 ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿನ್ನೆ ಕೆಎಸ್‍ಆರ್‍ಟಿಸಿ ಕೆ ಸ್ವಿಫ್ಟ್ ಸೇವೆಗೆ ಚಾಲನೆ ನೀಡಿದ್ದರು.  ರಾಜ್ಯ ಸರ್ಕಾರ ಸ್ಲೀಪರ್ ಬಸ್‍ಗಳನ್ನು ಪರಿಚಯಿಸುತ್ತಿರುವುದು ಇದೇ ಮೊದಲು. ಏ ಸ್ವಿಫ್ಟ್‍ನಲ್ಲಿರುವ ಹೆಚ್ಚಿನ ಬಸ್‍ಗಳನ್ನು ಅಂತರರಾಜ್ಯ ಸೇವೆಗಳಿಗೆ ಬಳಸಲಾಗುತ್ತದೆ. ಮೊದಲ ಹಂತದಲ್ಲಿ 99 ಬಸ್‍ಗಳು ಸಂಚಾರ ಆರಂಭಿಸಲಿವೆ. 28 ಎಸಿ ಬಸ್‍ಗಳು ಇದರಲ್ಲಿವೆ. ಇವುಗಳಲ್ಲಿ 8 ಎಸಿ ಸ್ಲೀಪರ್‍ಗಳು ಮತ್ತು 20 ಎಸಿ ಸೆಮಿ ಸ್ಲೀಪರ್‍ಗಳು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries