ಪಾಲಕ್ಕಾಡ್: ಎಲಪ್ಪುಳ್ಳಿ ಎಂಬಲ್ಲಿ ಪಾಪ್ಯುಲರ್ ಫ್ರಂಟ್ ನಾಯಕನೊಬ್ಬನನ್ನು ಕಡಿದು ಹತ್ಯೆ ಮಾಡಲಾಗಿದೆ. ಪಾಪ್ಯುಲರ್ ಫ್ರಂಟ್ ನೇತಾರನೆನ್ನಲಾದ ಜುಬೇರ್ (47) ಕೊಲೆಯಾದವರು. ಜುಬೇರ್ ಪಾಪ್ಯುಲರ್ ಫ್ರಂಟ್ನ ಎಲಪ್ಪುಳ್ಳಿ ಕ್ಷೇತ್ರ ಅಧ್ಯಕ್ಷರಾಗಿದ್ದಾರೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಸೀದಿಯ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದಾಗ ಜುಬೈರ್ಗೆ ಇರಿಯಲಾಗಿದೆ. ಕಾರಿನಲ್ಲಿ ಆಗಮಿಸಿದ ವ್ಯಕ್ತಿಗಳ ಗುಂಪು ಜುಬೈರ್ಗೆ ಯದ್ವಾತದ್ವ ಇರಿದು ಸಾಯಿಸಿದರು. ಜತೆಗಿದ್ದ ಜುಬ್ಯೆರ್ ನ ತಂದೆಗೂ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜುಬೈರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇದರ ಹಿಂದೆ ರಾಜಕೀಯ ದ್ವೇಷವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.