ಪಾಲಕ್ಕಾಡ್: ಲಂಚದ ಹಣ ಪಡೆದ ಘಟನೆಯಲ್ಲಿ ಅಬಕಾರಿ ವಿಭಾಗದ ಕಚೇರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 14 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಉಪ ಅಬಕಾರಿ ಆಯುಕ್ತ ಎಂ.ಎಂ. ನಾಸರ್ ಹಾಗೂ ಅಬಕಾರಿ ವೃತ್ತ ನಿರೀಕ್ಷಕರಾದ ಎಸ್.ಎಸ್. ಸಜೀವ್ ಮತ್ತು ಕೆ.ಅಜಯನ್ ಅವರನ್ನು ಅಮಾನತುಗೊಳಿಸಲಾಗಿದೆ. 16ರಂದು ಕಾಟಂಗೋಡು ಜಂಕ್ಷನ್ ನಲ್ಲಿ ಲಂಚದ ಹಣವನ್ನು ವಿಜಿಲೆನ್ಸ್ ವಶಪಡಿಸಿಕೊಂಡಿತ್ತು. 10,23,600 ಲಂಚ ವಶಪಡಿಸಿಕೊಳ್ಳಲಾಗಿತ್ತು.
ಅಬಕಾರಿ ವಿಭಾಗದ ಕಚೇರಿ ಸಹಾಯಕ ನೂರುದ್ದೀನ್ ಅವರ ವಾಹನದ ಡ್ಯಾಶ್ ಬೋರ್ಡ್ ನಲ್ಲಿ ಕವರ್ ನಲ್ಲಿ ಹಣ ಬಚ್ಚಿಟ್ಟಿದ್ದರು. ನೂರುದ್ದೀನ್ ಅವರು ವಿವಿಧ ಅಬಕಾರಿ ಕಚೇರಿಗಳಲ್ಲಿ ಪಾವತಿಸಲು ಅಂಗಡಿ ಪರವಾನಗಿದಾರರಿಂದ ಲಂಚ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಅಬಕಾರಿ ಚಿತ್ತೂರು ವೃತ್ತ ಕಚೇರಿ, ಇಂಟಲಿಜೆನ್ಸ್ ಬ್ಯೂರೋ ಮತ್ತು ವಿಶೇಷ ದಳಕ್ಕೆ ತಲಾ 2,20,000 ರೂ.ಗಳನ್ನು ಹಾಗೂ ಚಿತ್ತೂರು ರೇಂಜ್ ಕಚೇರಿಗೆ 195,000 ರೂ.ಗಳನ್ನು ಕಳುಹಿಸುವುದು ಅವರ ಉದ್ದೇಶವಾಗಿತ್ತು. ಆದರೆ ಅಷ್ಟರಲ್ಲಿ ವಿಜಿಲೆನ್ಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.