ಆಲಪ್ಪುಳ: ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ರ್ಯಾಲಿಯಲ್ಲಿ ಮಗುವಿನಿಂದ ಧರ್ಮವಿರೋಧಿ ಘೋಷಣೆಗಳನ್ನು ಕೂಗಿಸಿದ ಇಬ್ಬರನ್ನು ಕಸ್ಟಡಿಗೆ ನೀಡಲಾಗಿದೆ. ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಪಿ.ಎ.ನವಾಜ್ ಮತ್ತು ಅನ್ಸಾರ್ ನಜೀಬ್ ಬಂಧಿತರು. ಅನ್ಸಾರ್ ಮಗುವನ್ನು ರ್ಯಾಲಿಗೆ ಕರೆತಂದಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ. ಆತನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಲಾಗುತ್ತಿದೆ. ಮಗುವಿನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ಕಳೆದ ಶನಿವಾರ ಆಲಪ್ಪುಳದಲ್ಲಿ ನಡೆದ ರ್ಯಾಲಿ ವಿರುದ್ಧ ಆಲಪ್ಪುಳ ದಕ್ಷಿಣ ಪೋಲೀಸರು ಪ್ರಕರಣ ದಾಖಲಿಸಿದ್ದರು. ಸಮಾಜದಲ್ಲಿ ಜಾತ್ಯತೀತತೆಯನ್ನು ಕೆರಳಿಸಲು ಯತ್ನಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಗುವನ್ನು ರ್ಯಾಲಿಗೆ ಕರೆತಂದವರು ಹಾಗೂ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಪೋಲೀಸರು ಮೊದಲು ಕ್ರಮ ಕೈಗೊಳ್ಳಲು ಸಿದ್ಧರಾಗಿರಲಿಲ್ಲ. ಪ್ರತಿಭಟನೆಯ ನಂತರ ಕ್ರಮಕ್ಕೆ ಮುಂದಾದರು. ಮಗುವಿನ ಗುರುತು ಪತ್ತೆಯಾದರೆ ಪೋಷಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
ರ್ಯಾಲಿಯಲ್ಲಿ ಸಂಘ ಪರಿವಾರದ ವಿರುದ್ದ ದ್ವೇಶದ ಘೋಷಣೆ ಕೂಗಿದ್ದ. ಬಾಲಕ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತನ ಭುಜಕ್ಕೆ ಒರಗಿಕೊಂಡು ಘೋಷಣೆಗಳನ್ನು ಕೂಗಿದ್ದ. ಇದಲ್ಲದೇ ಬಾಬರಿ ವಿಚಾರವನ್ನೂ ಘೋಷಣೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಘಟನೆಯ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆ, ವ್ಯಾಪಕ ಟೀಕೆಗಳು ಹುಟ್ಟಿಕೊಂಡಿವೆ. ರ್ಯಾಲಿಯಲ್ಲಿ ಮಕ್ಕಳು ಭಾಗವಹಿಸಿದ್ದಕ್ಕೆ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.