HEALTH TIPS

ಡಾ.ಕೆ.ಜಿ.ವೆಂಕಟೇಶ್ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ 2022

                     ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ನೀಡುವ ಕನ್ನಡ ಪಯಸ್ವಿನಿ ಪ್ರಶಸ್ತಿ 2022 ಶಿವಮೊಗ್ಗದ ಡಾ.ಕೆ.ಜಿ.ವೆಂಕಟೇಶ್ ಅವರಿಗೆ ಅವರ ಸಂಶೋಧನಾ ಲೇಖನಗಳಿಗಾಗಿ ಪ್ರದಾನ ಮಾಡಲಾಯಿತು. 

                      ಕನ್ನಡ ಭÀವನ ಮತ್ತು ಗ್ರಂಥಾಲಯ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ವಾಮನರಾವ್ ಬೇಕಲ್ ಮತ್ತು ಕೋಶಾಧ್ಯಕ್ಷೆ ಸಂಧ್ಯಾರಾಣಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 

            ಕಾರ್ಯಕ್ರಮವನ್ನು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಗೌರವಾಧ್ಯಕ್ಷರಾದ ನಿರಂಜನ ಕೊರಕೋಡು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸೇವಾ ಸಂಘದ ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. 

              ಸಂಘದ ಪ್ರಧಾನ  ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾಧಿಕಾರಿ ಸತೀಶ್ ಮಾಸ್ತರ್, ಅಣಂಗೂರು ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಅಣಂಗೂರು ಶುಭ Àಹಾರೈಸಿದರು. ಕೂಡ್ಲು ಉಪಸಂಘದ ಅಧ್ಯಕ್ಷ ಸತೀಶ್ ಕೂಡ್ಲು, ಕಾಸರಗೋಡು ಉಪಸಂಘದ ವಿದ್ಯಾನಂದ ಹೂಡೆ, ಪತ್ರಕರ್ತ ಪ್ರದೀಪ್ ಬೇಕಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು. 

                   ಡಾ.ಕೆ. .ಜಿ.ವೆಂಕಟೇಶ್ ಅವರು ಮಾತನಾಡಿ ಕೇರಳದಲ್ಲಿ ಹರಿಯುವ ಚಂದ್ರಗಿರಿ ನದಿಯು ಕರ್ನಾಟಕದಿಂದ ಹರಿಯುತ್ತಿದ್ದು ಅದಕ್ಕೆ ಕರ್ನಾಟಕದಲ್ಲಿ ಪಯಶ್ವಿನಿ ಎಂಬ ಹೆಸರು ಇದ್ದು ಅದೇ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ನಾಡು ಮತ್ತು ಕೇರಳದ ಬಾಂಧ್ಯÀವ್ಯದ ಬಗ್ಗೆ ತಿಳಿಸಿ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಕನ್ನಡದ ಕಲೆಗಳ ಪರಿಚಯವನ್ನು ಮಾಡಿಕೊಟ್ಟರು. ನಂತರ ಗ್ರಂಥಾಲಯದಲ್ಲಿರುವ ವಿಶೇಷ ಪುಸ್ತಕಗಳನ್ನು ನೋಡಿ ರೆವರೆಂಡ್ ಕಿಟ್ಟಲ್ ಅವರ ನಿಘಂಟಿನ ಮೂಲಪ್ರತಿಯನ್ನು ಗುರುತಿಸಿ ಸಂತೋಷಗೊಂಡು ಗ್ರಂಥಾಲಯಕ್ಕೆ ಇನ್ನೂ ಅನೇಕ ಗ್ರಂಥಗಳನ್ನು ನೀಡುವುದಾಗಿ ತಿಳಿಸಿದರು. ಕನ್ನಡದ ಬಗ್ಗೆ ಇರುವ ಪ್ರೀತಿಗಾಗಿ ಗ್ರಂಥಾಲಯ ಸ್ಥಾಪನೆ ಮಾಡಿ 20 ವರ್ಷದಿಂದ ಅದನ್ನು ನಡೆಸಿಕೊಂಡು ಉಚಿತವಾಗಿ ವಿದ್ಯಾರ್ಥಿಗಳಿಗೆ ಸಂಶೋಧÀಕರಿಗೆ ಪುಸ್ತಕವನ್ನು ನೀಡುವುದು ಶ್ಲಾಘನೀಯ ಕಾರ್ಯ ಎಂದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries