ತಿರುವನಂತಪುರ: ರಾಜ್ಯದಲ್ಲಿ ಮುಚ್ಚಿರುವ ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಆದೇಶಿಸಿದೆ. ಸ್ಥಳೀಯರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಸ್ಥಳಾಂತರಗೊಂಡು ಯುಡಿಎಫ್ ಸರ್ಕಾರದ ಅವಧಿಯಲ್ಲಿ ಮುಚ್ಚಿದ್ದ ಸುಮಾರು 68 ಮದ್ಯದಂಗಡಿಗಳು ಮತ್ತೆ ತೆರೆಯುತ್ತಿವೆ. ಈ ನಿರ್ಧಾರವು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮದ್ಯ ನೀತಿಯ ಭಾಗವಾಗಿದೆ.
ಬಾರ್ಗಳ ಮುಂದೆ ದಟ್ಟಣೆ ತಪ್ಪಿಸಲು ಮುಚ್ಚಿದ ಮಳಿಗೆಗಳನ್ನು ಪ್ರೀಮಿಯಂ ಔಟ್ಲೆಟ್ಗಳಾಗಿ ಪರಿವರ್ತಿಸಲು ಬೆವ್ಕೊ ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ ಮುಚ್ಚಿದ ಮಳಿಗೆಗಳಿಗೆ ಪರವಾನಗಿ ನೀಡಲಾಯಿತು. ಈ ತಾಲ್ಲೂಕುಗಳಲ್ಲಿ ಅಂಗಡಿಗಳನ್ನು ತೆರೆಯಲು ಸಾಧ್ಯವಾಗದಿದ್ದರೆ, ಬೇರೆ ತಾಲ್ಲೂಕಿನಲ್ಲಿ ತೆರೆಯಲು ಸರ್ಕಾರ ಅನುಮತಿ ನೀಡಿದೆ.
ರಾಜ್ಯದ ಹೊಸ ಮದ್ಯ ನೀತಿ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಪರಿಷ್ಕøತ ಮದ್ಯ ನೀತಿಯಡಿ ಐಟಿ ಪಾರ್ಕ್ಗಳಲ್ಲಿ ಬಿಯರ್ ಮತ್ತು ವೈನ್ ಪಾರ್ಲರ್ಗಳಿಗೆ ಪರವಾನಗಿ ನೀಡಲಾಗುವುದು. ಮದ್ಯದ ನೀತಿಯು ಹಣ್ಣುಗಳಿಂದ ಕಡಿಮೆ ಆಲ್ಕೋಹಾಲ್ ಮದ್ಯವನ್ನು ಉತ್ಪಾದಿಸಲು ಬೆಂಬಲ ನೀಡುತ್ತದೆ.





