HEALTH TIPS

ಎರ್ನಾಕುಳಂನಲ್ಲಿ ನಾಪತ್ತೆಯಾಗಿದ್ದ ಜಿ.ಎಸ್.ಟಿ. ಅಧಿಕಾರಿ ತಮಿಳುನಾಡಿನಲ್ಲಿ ಪತ್ತೆ; ಸಂಜೆ ಕೊಚ್ಚಿಗೆ ಕರೆತರುವ ಸಾಧ್ಯತೆ

                 ಎರ್ನಾಕುಳಂ: ಎರ್ನಾಕುಳಂನಲ್ಲಿ ನಾಪತ್ತೆಯಾಗಿದ್ದ ಜಿಎಸ್‍ಟಿ ಅಧಿಕಾರಿಯೊಬ್ಬರು  ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾರೆ. ಅಜಿಕುಮಾರ್ ತೂತುಕುಡಿಯಲ್ಲಿ ಪತ್ತೆಯಾಗಿದ್ದಾರೆ. ಅಜಿಕುಮಾರ್ ಕೊಲ್ಲಂ ಮೂಲದವರು.

                      ಕೊಚ್ಚಿ ಇನ್ಫೋ ಪಾರ್ಕ್ ಪೋಲೀಸರು ನೀಡಿದ ಮಾಹಿತಿ ಮೇರೆಗೆ ತಮಿಳುನಾಡು ಪೋಲೀಸರು ಆತನನ್ನು ಪತ್ತೆ ಮಾಡಿದ್ದಾರೆ. ಇಂದು ಸಂಜೆ ಅಜಿಕುಮಾರ್ ಅವರನ್ನು ಕೊಚ್ಚಿಗೆ ಕರೆತರಲಾಗುವುದು ಎಂದು ತಿಳಿದುಬಂದಿದೆ.

             ಪೋಲೀಸರ ತನಿಖೆ ತೃಪ್ತಿಕರವಾಗಿಲ್ಲ ಎಂದು ಕುಟುಂಬದವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಮೂರು ದಿನಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಆಯೋಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪೋಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

                  ಅಜಿಕುಮಾರ್ ನಾಪತ್ತೆ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಂಬಂಧಿಕರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದರು. ಅಜಿಕುಮಾರ್ ಕಳಮಶ್ಶೇರಿ ಮಾರಾಟ ತೆರಿಗೆ ಗುಪ್ತಚರ ಘಟಕದಲ್ಲಿ ಜಿಎಸ್‍ಟಿ ಅಧಿಕಾರಿಯಾಗಿದ್ದಾರೆ. ಅಜಿಕುಮಾರ್ ಕಳೆದ 3 ತಿಂಗಳುಗಳಿಂದ ವರ್ಷಗಳಿಂದ ನಾಪತ್ತೆಯಾಗಿದ್ದರು. ಅಜಿಕುಮಾರ್ ಮೂರು ತಿಂಗಳ ಹಿಂದೆ ಪುನಲೂರು ಕಚೇರಿಯಿಂದ ಕಾಕ್ಕನಾಡು ಕಚೇರಿಗೆ ತೆರಳಿ ಬಳಿಕ ಮರಳಿರಲಿಲ್ಲ. 

          ರಜೆ ಮುಗಿಸಿ ಕೆಲಸಕ್ಕೆ ಮರಳಲು ಎರ್ನಾಕುಳಂಗೆ ತೆರಳಿದ್ದ ಅಜಿಕುಮಾರ್ ನಂತರ ನಾಪತ್ತೆಯಾಗಿದ್ದರು. ಪುನಲೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಡತಗಳು ನಾಪತ್ತೆಯಾಗಿದ್ದರಿಂದ ಅಜಿಕುಮಾರ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಸಂಬಂಧಿಕರು ಹೇಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries