HEALTH TIPS

ಸಹೃದಯಿ ದಾನಿಗಳ ನಿರೀಕ್ಷೆಯಲ್ಲಿ ಪುದುಕೋಳಿಯ ವಸಂತ ಹಾಗೂ ಚಂದ್ರಲೇಖಾ ದಂಪತಿಗಳ ಕುಟುಂಬ

     

            ಬದಿಯಡ್ಕ:  ಮಾನವನಿಗೆ ಸಂಕಷ್ಟ ಬಂದೊದಗುವುದು ವಿಧಿಲಿಖಿತ. ಆದರೂ ಮಾನವೀಯತೆ ಮೆರೆದು ಸಹಕರಿಸುವ ದಾನಿಗಳಿಗೇನೂ ಕೊರತೆಯಿಲ್ಲ.

             ನೀರ್ಚಾಲು ಬಳಿಯ ಪುದುಕೋಳಿ ನೆಲ್ಲಿಯಡ್ಕ  ವಸಂತ- ಚಂದ್ರಲೇಖಾ ದಂಪತಿಗಳು  ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ವಸಂತ ಅವರಿಗೆ ಕಿಡ್ನಿ ಸಂಬಂಧ ಅನಾರೋಗ್ಯ ಕಾಡಲಾರಂಭಿಸಿ ವಿವಿಧ ಆಯುರ್ವೇದ ಅಲೋಪತಿವರೆಗೂ ಔಷಧೋಪಚಾರ ಮಾಡಿ ನಿರೀಕ್ಷಿತ ಫಲ ಲಭಿಸಿಲ್ಲ. ಲಕ್ಷಾಂತರ ರೂಪಾಯಿ ಖರ್ಚಾಗಿದೆ. 

ಈಗ ವಾರಕ್ಕೆ 2 ಸಲ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಯುತ್ತಿದೆ. ಚಿಕಿತ್ಸೆಯ ಮಧ್ಯೆ ಕೂಲಿ ಕೆಲಸ ಮಾಡಿ ಜೀವನವನ್ನು ಸಾಗಿಸುತ್ತಿದ್ದ ಅವರು ದುರದೃಷ್ಟವಶಾತ್ ಕೆಲಸದ ವೇಳೆ ಬಿದ್ದು ಕೈಗೆ ತೀವ್ರ ತಾಗಿ ಕಾಸರಗೋಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇದ್ದಾರೆ. ಈಗಾಗಲೇ ಲಕ್ಷಾಂತರ ರೂ. ಖರ್ಚಾಗಿದ್ದು ಈ  ಬಡಕುಟುಂಬ ಇದೀಗ ಬರಸಿಡಿಲು ಬಡಿದಂತೆ ದಾರಿ ಕಾಣದೆ ಕಂಗಾಲಾಗಿದೆ.

                    ಚಿಕಿತ್ಸೆಯ ಖರ್ಚು ಭರಿಸಲಾಗದ ಈ ಬಡಕುಟುಂಬ  ನೀರ್ಚಾಲಿನ  ಸೇವಾ ಭಾರತಿ ಸಂಸ್ಥೆಯನ್ನು ಸಂಪರ್ಕಿಸಿ ಸಹಾಯ ಧನ ಯಾಚಿಸಿದ್ದಾರೆ. ಸಹೃದಯ ಬಂಧುಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಈ ಬಡಕುಟುಂಬದ ಜೊತೆ ನಿಂತು ತಮ್ಮಿಂದಾದ ರೀತಿಯಲ್ಲಿ ಧನಸಹಾಯ ನೀಡಿ ಸಹಕರಿಸಬೇಕೆಂದು ಈ  ಮೂಲಕ ಸೇವಾ ಭಾರತಿ ವಿನಂತಿಸಿದೆ. ನೆರವು ನೀಡುವವರು ಗೂಗಲ್ ಪೇ ಚಂದ್ರಲೇಖಾ-  9544634446 ಅಥವಾ  ಸೇವಾ ಭಾರತಿ ನೀರ್ಚಾಲು ಘಟಕವನ್ನು ಸಂಪರ್ಕಿಸಬಹುದು ಎಂದು ವಿನಂತಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries