HEALTH TIPS

ಆಸ್ಪತ್ರೆಯ ಕ್ಯಾಂಟೀನ್ ಮತ್ತು ಹಾಸ್ಟೆಲ್ ಮೆಸ್ ನಲ್ಲಿ ಹಳಸಿದ ಆಹಾರ; ವಶಪಡಿಸಿಕೊಂಡ ಆಹಾರ ಸುರಕ್ಷಾ ಇಲಾಖೆ; ಕಾಸರಗೋಡು ಸಹಿತ ಐದು ಜಿಲ್ಲೆಗಳಲ್ಲಿ ತಪಾಸಣೆ

                  ತಿರುವನಂತಪುರ: ರಾಜ್ಯದಲ್ಲಿ ಆಹಾರ ಭದ್ರತಾ ಇಲಾಖೆಯ ತಪಾಸಣೆ ವ್ಯಾಪಕವಾಗಿ ನಡೆಯುತ್ತಿದೆ. ಸ್ಟಾಲ್‍ಗಳಿಂದ ಸ್ಟಾರ್ ಹೋಟೆಲ್‍ಗಳವರೆಗೆ ತಪಾಸಣೆ ನಡೆಸಲಾಗುತ್ತಿದ್ದು,  ಕೆಜಿಗಟ್ಟಲೆ ಹಳಸಿದ ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯ ವಿಲನ್ ಮಾಂಸವೇ ಆಗಿದೆ. ಆದರೆ ಹೋಟೆಲ್ ಮಾತ್ರವಲ್ಲದೆ ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಹಾಸ್ಟೆಲ್ ಮೆಸ್ ನಿಂದಲೂ ಇಂತಹ ಹಳಸಿದ ಆಹಾರ ವಶಪಡಿಸಿಕೊಳ್ಳಲಾಗಿದೆ ಎಂಬುದು ಕಳವಳಕ್ಕೆ ಕಾರಣವಾಗಿದೆ.

                 ತಿರುವನಂತಪುರ, ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಪಾಸಣೆ ನಡೆಸಲಾಗಿದೆ. ತಿರುವನಂತಪುರದ ನೆಡುಮಂಗಡದಲ್ಲಿರುವ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್ ಮತ್ತು ಆಸ್ಪತ್ರೆಯ ಹಾಸ್ಟೆಲ್ ಮೆಸ್ ನಿಂದ 25 ಕೆಜಿ ಹಳಸಿದ ಮೀನು ಸಿಕ್ಕಿಬಿದ್ದಿದೆ. ಪರಿಶೀಲನೆ ನಡೆಸಿದಾಗ ಇಲ್ಲಿಂದ ಹಳೆಯ ಎಣ್ಣೆ ಹಾಗೂ ಪೊರೋಟ ಪತ್ತೆಯಾಗಿದೆ. ಹಾಸ್ಟೆಲ್ ಮೆಸ್‍ಗಳಿಂದ ಹಳಸಿದ ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ.

                ಕಳೆದ ಆರು ದಿನಗಳಿಂದ ನಡೆಸಲಾಗುತ್ತಿರುವ ಶೋಧದಲ್ಲಿ ರಾಜ್ಯಾದ್ಯಂತ 140 ಕೆಜಿ ಹಳಸಿದ ಮಾಂಸ, ಮೀನು ಹಾಗೂ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. 1132 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ನಿನ್ನೆಯವರೆಗೆ 110 ನಿಯಮ ಪಾಲಿಸದ ಅಂಗಡಿಗಳನ್ನು ಮುಚ್ಚಲಾಗಿದೆ. ಮೊನ್ನೆಯಿಂದ 347 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಾಸರಗೋಡಿನ ಚೆರುವತ್ತೂರಿನಲ್ಲಿ ವಿಷಾಹಾರ ಸೇವಿಸಿ ಬಾಲಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪರೀಕ್ಷೆ ತೀವ್ರಗೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries