HEALTH TIPS

ಸತೀಶ್ ಕೆ.ಮಾಸ್ತರ್ ಕೂಡ್ಲು, ಪ್ರಭಾಕರ ರಾವ್ ಪಳ್ಳಿಕ್ಕೆರೆ ಅವರಿಗೆ ಗುರುನಮನ


                ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ವಿಂಶತಿ ಉತ್ಸವದ ಅಂಗವಾಗಿ ಕೇರಳ ರಾಜ್ಯ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ ಪುರಸ್ಕøತ, ಕ್ರೀಡಾಪಟು, ಸಾಮುದಾಯಿಕ, ಧಾರ್ಮಿಕ, ಸಾಮಾಜಿಕ ಸೇವೆಯನ್ನು ಗೌರವಿಸಿ ಸತೀಶ್ ಕೆ.ಮಾಸ್ತರ್ ಕೂಡ್ಲು ಹಾಗು ಯಕ್ಷಗಾನ ಕಲಾ ಕ್ಷೇತ್ರ, ಸಾಮುದಾಯಿಕ, ಧಾರ್ಮಿಕ, ಸಾಮಾಜಿಕ ಸೇವೆಯನ್ನು ಗೌರವಿಸಿ ಪ್ರಭಾಕರ ರಾವ್ ಪಳ್ಳಿಕ್ಕೆರೆ ಅವರಿಗೆ ಕನ್ನಡ ಗ್ರಂಥಾಲಯದ ಸಭಾ ಭವನದಲ್ಲಿ ಗುರು ನಮನ ಸಲ್ಲಿಸಲಾಯಿತು.  
                   ಕನ್ನಡ ಭವನದ ಸ್ಥಾಪಕ ವಾಮನ ರಾವ್ ಬೇಕಲ್, ಕೋಶಾಧಿಕಾರಿ ಸಂಧ್ಯಾರಾಣಿ ಅವರು ಸತೀಶ್ ಕೆ.ಮಾಸ್ತರ್ ಕೂಡ್ಲು ದಂಪತಿಗಳನ್ನು ಹಾಗು ಪ್ರಭಾಕರ ರಾವ್ ಪಳ್ಳಿಕ್ಕೆರೆ ದಂಪತಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸಮ್ಮಾನಿಸಿ ಗೌರವಿಸಿದರು.
                      ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಅವರು ಸಮ್ಮಾನಿತರ ಸಾಧನೆ, ಸಮಾಜ ಸೇವೆ, ಕನ್ನಡ ಪೋಷಣೆ ಮೊದಲಾದ ರಂಗಕ್ಕೆ ನೀಡಿದ ಕೊಡುಗೆ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.
                   ಕಾರ್ಯಕ್ರಮದಲ್ಲಿ ಗ್ರಂಥಾಲಯದ ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ, ಬಿಇಎಂ ಹೈಯರ್ ಸೆಕೆಂಡರಿಯ ಪ್ರಾಂಶುಪಾಲ ರಾಜೇಶ್ಚಂದ್ರ ಕೆ.ಪಿ. ಅಣಂಗೂರು ಭಾಗವಹಿಸಿದರು. ಲೇಖಕ ನರಸಿಂಹ ಮಂಗಳೂರು, ಉಷಾ ಟೀಚರ್ ಪಾರೆಕಡವು ಮೊದಲಾದವರು ಉಪಸ್ಥಿತರಿದ್ದರು.
                     ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ಸ್ಥಾಪಕ ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries