HEALTH TIPS

'ಶಿಕ್ಷಣದ ವಾಣಿಜ್ಯೀಕರಣ ಪುಸ್ತಕದ ಓದಿಗೆ ಕುತ್ತು': ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್ ಖಂಡಿಗೆ

              ಮಂಜೇಶ್ವರ: 'ಓದು ಆತ್ಮಜ್ಞಾನ,ಆತ್ಮ ಸ್ಥೈರ್ಯ, ಅರಿವು,ಆನಂದವನ್ನು ನೀಡುತ್ತದೆ. ಆದರೆ ಪ್ರಸ್ತುತ ಶಿಕ್ಷಣದ ವಾಣಿಜ್ಯೀಕರಣವು ಸಾಹಿತ್ಯಿಕ ಓದಿಗೆ ಕುತ್ತನ್ನು ತಂದೊಡ್ಡುತ್ತಿವೆ. ಇಂತಹ ಆತಂಕದ ಸಂದರ್ಭದಲ್ಲಿಯೂ ಕೇರಳದಾದ್ಯಂತ ಪಿ.ಎನ್.ಪಣಿಕ್ಕರ್ ರವರ ನೆನಪಿನಲ್ಲಿ ಆಚರಿಸಲಾಗುತ್ತಿರುವ ವಾಚನಾಚರಣೆಯು ಮಕ್ಕಳಲ್ಲಿ ವಾಚನಾಭಿರುಚಿಯನ್ನು ಬೆಳೆಸಲು ಸಹಕಾರಿ.ಕನ್ನಡದಲ್ಲಿ ಗಳಗನಾಥರು ಇದೇ ಕೈಂಕರ್ಯವನ್ನು ಕೈಗೊಂಡಿದ್ದರು' ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರ ದ ಸದಸ್ಯರೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೂ ಆಗಿರುವ ಟಿ.ಎ.ಎನ್.ಖಂಡಿಗೆ ನುಡಿದರು. 

              ಅವರು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ವಾಚನಾ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

              ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ.ವಹಿಸಿದ್ದರು. ಹಿರಿಯ ಶಿಕ್ಷಕಿ ಲಲಿತಾ ಶುಭಾಶಂಸನೆಗೈದರು.ಶಿಕ್ಷಕಿ   ಅಮಿತಾ ಸ್ವಾಗತಿಸಿ, ಶಿಕ್ಷಕಿ  ಸುಚೇತಾ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಕೆ.ಎಚ್.ಮಹಮ್ಮದ್ ಉಪಸ್ಥಿತರಿದ್ದರು. ಶಿಕ್ಷಕ ದಿವಾಕರ ಬಲ್ಲಾಲ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries