HEALTH TIPS

ಗಜಪ್ರಸವಕ್ಕಾಗಿ ರಸ್ತೆಯೇ ಬಂದ್; 2 ರಾಜ್ಯಗಳ ಮಾರ್ಗದ ಮಧ್ಯೆ 1 ಗಂಟೆ ಸಂಚಾರ ಸ್ಥಗಿತ!

              ಇಡುಕ್ಕಿ :ಗಣ್ಯ ವ್ಯಕ್ತಿಗಳ ಆಗಮನ-ನಿರ್ಗಮನ ಇಲ್ಲವೇ ಅಪಘಾತ, ಪ್ರಕೃತಿವಿಕೋಪದ ಪರಿಣಾಮವಾಗಿ ರಸ್ತೆ ಬಂದ್ ಆಗುವುದು, ಸಂಚಾರ ಸ್ಥಗಿತಗೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಒಂದು ವಿಶೇಷ ಕಾರಣಕ್ಕಾಗಿ ರಸ್ತೆ ಬಂದ್ ಆಗಿತ್ತು. ಆ ಕಾರಣ ಮತ್ತೇನೂ ಅಲ್ಲ, ಗಜಪ್ರಸವ.

            ಹೌದು.. ಆನೆಯೊಂದರ ಹೆರಿಗೆಯ ಕಾರಣಕ್ಕಾಗಿ ಎರಡು ರಾಜ್ಯಗಳ ನಡುವಿನ ಮಾರ್ಗದಲ್ಲಿ ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ತಮಿಳುನಾಡು ಮತ್ತು ಕೇರಳವನ್ನು ಸಂಪರ್ಕಿಸವು ಮಾರ್ಗದಲ್ಲಿ ಇಡುಕ್ಕಿ ಜಿಲ್ಲೆಯ ಮರಯೂರ್ ಪ್ರದೇಶದಲ್ಲಿ ಈ    ಗಜಪ್ರಸವ ಸಂಭವಿಸಿದೆ.

              ಈ ಪ್ರದೇಶದಲ್ಲಿ ಆನೆಯೊಂದು ರಸ್ತೆ ಮಧ್ಯೆಯೇ ಹೆರಿಗೆಗೆ ಒಳಗಾದ್ದರಿಂದ ರಸ್ತೆಯ ಎರಡೂ ಕಡೆ ಇಂದು ಬೆಳಗ್ಗೆ ಸುಮಾರು ಒಂದು ಗಂಟೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಹೆರಿಗೆಯ ಬಳಿಕ ಆನೆ ಮರಿಯೊಂದಿಗೆ ಕಾಡನ್ನು ಪ್ರವೇಶಿಸಿದ ನಂತರವೇ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries