HEALTH TIPS

ಎಡನೀರು ಶ್ರೀ ಚಾತುರ್ಮಾಸ್ಯ: ಗಮನ ಸೆಳೆದ ಯಕ್ಷಗಾನ ತಾಳಮದ್ದಳೆ: ಇಂದು ಮಂತ್ರಮುಗ್ದಗೊಳಿಸುವ ಭಕ್ತಿಸಂಗೀತ

                     ಬದಿಯಡ್ಕ: ಎಡನೀರು ಶ್ರೀಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಎರಡನೇ ಚಾತುರ್ಮಾಸ್ಯ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಧೀ ಶಕ್ತಿ ಮಹಿಳಾ ಯಕ್ಷಗಾನ ಮಂಡಳಿಯವರಿಂದ ನಿನ್ನೆ  ಶ್ರೀಹರಿ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ಲವ ಕುಮಾರ,  ಪಿ.ಜಿ. ಜಗನ್ ನಿವಾಸ ರಾವ್, ಮುಮ್ಮೇಳದಲ್ಲಿ ಪದ್ಮ.ಕೆ. ಆಚಾರ್,  ಜಯಲಕ್ಷ್ಮಿ ಭಟ್, ಪ್ರೇಮ ಕಿಶೋರ್, ಶುಭ ಆಚಾರ್ಯ, ಪ್ರೇಮ ನೂರಿತ್ತಾಯ ಸಹಕರಿಸಿದ್ದರು.




                  ಇಂದು ಸಂಜೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯಜ್ಞೇಶ ಆಚಾರ್ಯ ಸುಬ್ರಹ್ಮಣ್ಯ ಮತ್ತು ತಂಡದವರಿಂದ ಸಂಜೆ 6 ರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸತ್ಯನಾರಾಯಣ ಐಲ(ಹಾರ್ಮೋನಿಯಂ) ಹಾಗೂ ಲವಕುಮಾರ ಐಲ(ತಬಲಾ)ದಲ್ಲಿ ಸಹಕರಿಸುವರು. 

          ನಾಳೆ ಸಂಜೆ 6 ರಿಂದ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನ ಗುರು ವಿದುಷಿಃ ವಿದ್ಯಾ ಮನೋಜ್ ಇವರ ಶಿಷ್ಯೆಯರಾದ ವಿದುಷಿಃ ಶ್ರೀದೇವಿ ಕಲ್ಲಡ್ಕ ಹಾಗೂ ವಿದುಷಿಃ ಡಾ.ಮಹಿಮಾ ಎಂ.ಪಣಿಕ್ಕರ್ ಅವರಿಂದ ಯುಗಳ ನೃತ್ಯ ಪ್ರದರ್ಶನ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries