HEALTH TIPS

ಸುದ್ದಿ ಸುಳ್ಳು: ಆಶ್ರಮ ಸುಟ್ಟ ಪ್ರಕರಣದ ತನಿಖೆ ನಿಂತಿಲ್ಲ ಎಂದ ಸಂದೀಪಾನಂದಗಿರಿ

                    ತಿರುವನಂತಪುರ: ಆಶ್ರಮದ ಹೋಂಸ್ಟೇ  ಸುಟ್ಟ ಪ್ರಕರಣದ ತನಿಖೆಯನ್ನು ಮುಚ್ಚಲಾಗುತ್ತಿದೆ ಎಂಬ ಸುದ್ದಿ ಸುಳ್ಳು ಎಂದು ಸ್ವಾಮಿ ಸಂದೀಪಾನಂದಗಿರಿ ಹೇಳಿದ್ದಾರೆ. ಸಂದೀಪಾನಂದಗಿರಿ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಬಗ್ಗೆ ಅಪರಾಧ ದಳದಿಂದ ಮಾಹಿತಿ ಲಭಿಸಿದೆ ಎಂದು ಮಾಹಿತಿ ನೀಡಿದರು. ಮೂರೂವರೆ ವರ್ಷ ಕಳೆದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಕ್ರೈಂ ಬ್ರಾಂಚ್ ನಿರ್ಧರಿಸಿದೆ ಎಂಬ ವರದಿಗಳು ಹೊರಬಿದ್ದಿದ್ದವು. 

                      ಅಕ್ಟೋಬರ್ 27, 2018 ರಂದು, ತಿರುವನಂತಪುರದ ಕುಂದಮಂಕಡವು ಸ್ವಾಮಿ ಸಂದೀಪಾನಂದಗಿರಿಯ ಆಶ್ರಮದ ಹೋಂಸ್ಟೇ ಬೆಂಕಿಗಾಹುತಿಯಾಗಿತ್ತು. ಆಶ್ರಮದ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದಾದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಪ್ರಕರಣವನ್ನು ಆರಂಭದಲ್ಲಿ ಪೋಲೀಸರು ತನಿಖೆ ನಡೆಸಿ ನಂತರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದರು. ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದ ಟೋಮಿನ್ ತಚ್ಚಂಗÀರಿ ಅವರು ಬಂದು ತನಿಖೆ ನಡೆಸಿದರೂ ಆರೋಪಿಗಳು ಪತ್ತೆಯಾಗಿರಲಿಲ್ಲ.

               ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂಬ ಸುದ್ದಿಗೆ  ಸ್ವಾಮಿ ಸಂದೀಪಾನಂದಗಿರಿ ಪ್ರತಿಕ್ರಿಯಿಸಿ ಈ ಮೂಲಕ ನಿರಾಕರಿಸಿದ್ದಾರೆ. ತನಿಖೆಯನ್ನು ಅಂತ್ಯಗೊಳಿಸಿರುವುದು ಬೇಸರ ತಂದಿದೆ ಎಂದ ಅವರು, ಪೋಲೀಸರು ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಘಟನೆ ಹಿಂದೆ ಸಂದೀಪಾನಂದಗಿರಿಯೇ ಇರುವರೆಂದು ಅಂದು ಬಿಜೆಪಿ ನಾಯಕರು ಆರೋಪಿಸಿತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries