ಪೆರ್ಲ: ಭಾರತೀಯ ಕಮ್ಯುನಿಷ್ಟ್ ಪಕ್ಷ(ಸಿಪಿಐ)ದ 24ನೇ ಪಾರ್ಟಿ ಕಾಂಗ್ರೆಸ್ ಒ.14ರಿಂದ ವಿಜಯವಾಡದಲ್ಲಿ ಜರಗಲಿದ್ದು ಇದರ ಅಂಗವಾಗಿ ಸಿಪಿಐ ಬದಿಯಡ್ಕ ಮಂಡಲ ಸಮ್ಮೇಳನವು ಪೆರ್ಲದ ವ್ಯಾಪಾರಿ ಸಭಾಂಗಣದಲ್ಲಿ ಪ್ರತ್ಯೇಕವಾಗಿ ಸಜ್ಜೀಕರಿಸಿದ ಕಾ. ಎಂ.ಕೆ.ಬಾಲಕೃಷ್ಣ ನಗರದಲ್ಲಿ ಎರಡು ದಿನಗಳಲ್ಲಾಗಿ ಜರಗಿತು.
ಪ್ರಥಮ ದಿನ ಶನಿವಾರ ಸಂಜೆ ನಡೆದ ಕಾರ್ಯಕ್ರಮಲ್ಲಿ ಸಿಪಿಐ ನೇತಾರ ಸ್ವರ್ಗದ ದಿ.ಬಾಲಕೃಷ್ಣ ಅವರ ಪತ್ನಿ ಭಾಗಿರಥಿ ಬಿ.ಕೆ.ಇವರು ಎಐವೈಎಫ್ ನೇತಾರ ಸನೋಜ್ ಕಾಡಗಂ ಅವರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಆರಂಭಗೊಂಡಿತು. ಬಳಿಕ ಸ್ವರ್ಗ ಜಂಕ್ಷನ್ ನಿಂದ ಸಮ್ಮೇಳನದ ಧ್ವಜಸ್ತಂಭವನ್ನು ಈಶ್ವರ ಪ್ರಸಾದ್ ಅವರು ಮಂಡಲ ಕಿಸಾನ್ ಸಭಾದ ಕಾರ್ಯದರ್ಶಿ ಡಿ.ಸುಧಾಕರನ್ ಅವರಿಗೆ ಹಸ್ತಾಂತರಿಸಿದರು. ಬಳಿಕ ವಾಹನ ಮೆರವಣಿಗೆಯಲ್ಲಾಗಿ ಸಮ್ಮೇಳನ ನಗರಿಗೆ ತರಲಾಯಿತು. ಸಮ್ಮೇಳನ ಬ್ಯಾನರ್ ನ್ನು ಬಜಕೂಡ್ಲು ದಿ.ಮೊಯ್ದಿನ್ ಕುಂಞ ಕುಟುಂಬಸ್ಥರು ಎಐಟಿಯುಸಿ ನೇತಾರ ಚಂದ್ರಶೇಖರ ಶೆಟ್ಟಿ ವರಿಗೆ ಹಸ್ತಾಂತರಿಸಿದರು. ಬಳಿಕ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ಸಿಪಿಐ ದೇಶಿಯ ಕೌನ್ಸಿಲ್ ಸದಸ್ಯ, ಶಾಸಕ ಇ.ಚಂದ್ರಶೇಖರ್ ಉದ್ಘಾಟಿಸಿದರು. ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಎಂ.ಕೃಷ್ಣನ್ ಸಭೆಯ ಅಧ್ಯಕ್ಷತೆವಹಿಸಿದ್ದರು. ದೇಶಿಯ ಕೌನ್ಸಿಲ್ ಸದಸ್ಯ ಗೋವಿಂದನ್ ಪಳ್ಳಿಕಾಪಿಲ್,ಜಿಲ್ಲಾ ಕಾರ್ಯದರ್ಶಿ ಪಿ.ಎನ್.ಆರ್.ಅಮ್ಮಣ್ಣಾಯ,ಚಂದ್ರಶೇಖರ ಶೆಟ್ಟಿ,ಸುಕುಮಾರನ್,ಜಿಲ್ಲಾ ಕೌನ್ಸಿಲ್ ಸಹ ಕಾರ್ಯದರ್ಶಿ ಸುರೇಶ್ ಬಾಬು, ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಅಬ್ದುಲ್ ರಸಾಕ್,ಎಣ್ಮಕಜೆ ಗ್ರಾ.ಪಂ.ಸದಸ್ಯರಾದ ನರಸಿಂಹ ಪೂಜಾರಿ,ರಾಮಚಂದ್ರ ಎಂ,ಎಐವೈಎಫ್ ನೇತಾರ ಸನೋಜ್ ಕಾಡಗಂ,ಪ್ರಕಾಶ್ ಕುಂಬ್ಡಾಜೆ,ಸುಧಾಕರ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಿಪಿಐ ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದರ್ಶಿ ಪಿ.ಎಸ್.ಕಡಂಬಳಿತ್ತಾಯ ಸ್ವಾಗತಿಸಿದರು.
ದ್ವಿತೀಯ ದಿನ ಭಾನುವಾರ ಜರಗಿದ ಪ್ರತಿನಿಧಿ ಸಮ್ಮೇಳನವನ್ನು ಸಿಪಿಐ ರಾಜ್ಯ ಕಂಟ್ರೋಲ್ ಕಮಿಷನ್ ಅಧ್ಯಕ್ಷ ಸಿ.ಪಿ.ಮುರಳಿ ಉದ್ಘಾಟಿಸಿದರು. ಮಂಡಲದ ಪ್ರತಿನಿಧಿಗಳು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದರು.




