HEALTH TIPS

ಈ ಮಹಾ ಬಂಪರ್ ಲಾಟರಿ ಸಿಕ್ಕಿದರೆ ಕೆ.ಎಸ್. ಆರ್. ಟಿ.ಸಿ. ನೌಕರರಿಗೆ ವೇತನ ನೀಡಬಹುದಿತ್ತು!; ಸಾರಿಗೆ ಸಚಿವ

                    ತಿರುವನಂತಪುರ: ಮಹಾ ಬಂಪರ್ ಲಾಟರಿ ಹೊಡೆದಿದ್ದರೆ ಕೆಎಸ್ ಆರ್ ಟಿಸಿ ನೌಕರರಿಗೆ ವೇತನ ನೀಡಬಹುದಿತ್ತು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. 25 ಕೋಟಿ ಮೊತ್ತದ ಪ್ರಥಮ ಬಹುಮಾನ ನೀಡುವ ಬಂಪರ್ ಲಾಟರಿ ಬಿಡುಗಡೆ ಸಮಾರಂಭದಲ್ಲಿ ಸಚಿವರು ಈ ವಿಷಯ ತಿಳಿಸಿದರು.ವಿತ್ತ ಸಚಿವರ ಜತೆಗಿನ ಮಾತುಕತೆಯ ವಿವರ ನೀಡಿದ ಸಚಿವರು ಈ ವಿಷಯ ತಿಳಿಸಿದರು.

                     ಸಮಾರಂಭದ ಸ್ವಾಗತ ಸಂದರ್ಭದಲ್ಲಿ ಎಲ್ಲರಿಗೂ ಲಾಟರಿ ಸ್ಲಿಪ್ ಪುಸ್ತಕ ನೀಡಲಾಯಿತು. ಆ ಸಮಯದಲ್ಲಿ, ಉಡುಗೊರೆಯ ಬದಲು ಲಾಟರಿ ನೀಡಬೇಕೆಂದು ನಾನು ನಾನು ಬಯಸಿದ್ದೆ. ಇದನ್ನು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಣಕಾಸು ಸಚಿವರಿಗೆ ಹೇಳಿದ್ದೆ. ಯಾವುದಾದರೂ ಲಾಟರಿ ಹೊಡೆದರೆ ಸಿಗುವುದಿಲ್ಲ ಎಂದ ಅವರು, ಪುಸ್ತಕವೇ ಸಾಕು ಎಂದು ನಿರ್ಧರಿಸಿದರು. ಹಾಗಾಗಿ ಕೆ.ಎಸ್.ಆರ್.ಟಿ.ಸಿ ಕನಿಷ್ಠ ವೇತನವನ್ನಾದರೂ ನೌಕರರಿಗೆ ನೀಡಬಹುದಿತ್ತು ಎಂಬುದು ಸಚಿವರು ಹೇಳಿದರು. 

                ರಾಜ್ಯ ಸರ್ಕಾರದ ಈ ವರ್ಷದ ಓಣಂ ಬಂಪರ್  ಹಣಕಾಸು ಸಚಿವ ಬಾಲಗೋಪಾಲ್ ಅವರು ಸಚಿವ ಆಂಟನಿ ರಾಜು ಅವರಿಗೆ ಟಿಕೆಟ್ ನೀಡುವ ಮೂಲಕ ಬಿಡುಗಡೆ ಮಾಡಿದರು. ಬಹುಮಾನದ ಮೊತ್ತ 25 ಕೋಟಿ. ಇದು ಕೇರಳ ಲಾಟರಿ ಇತಿಹಾಸದಲ್ಲಿ ಅತ್ಯಧಿಕ ಲಾಟರಿ ಬಹುಮಾನ ಮೊತ್ತವಾಗಿದೆ. ಕಳೆದ ಮೂರು ವರ್ಷಗಳಲ್ಲಿ ತಿರುವೋಣಂ ಬಂಪರ್  ಬಹುಮಾನದ ಮೊತ್ತ 12 ಕೋಟಿ.

                   ಈ ಮಹಾ ಬಂಪರ್ ಟಿಕೆಟ್ ಒಂದರ ದರ 500.ರೂ. 10 ಸರಣಿಗಳಲ್ಲಿ ಬಿಡುಗಡೆಯಾಗಲಿರುವ ಭಾಗ್ಯ ಕುರಿಯಲ್ಲಿ ಹತ್ತು ಮಂದಿಗೆ ದ್ವಿತೀಯ ಬಹುಮಾನವಾಗಿ 5 ಕೋಟಿ ರೂ., ತೃತೀಯ ಬಹುಮಾನವಾಗಿ 1 ಕೋಟಿ ರೂ. ನೀಡಲಾಗುವುದು. ಜುಲೈ 18 ರಂದು ಬಂಪರ್ ಟಿಕೆಟ್ ಗಳ  ಮಾರಾಟ ಆರಂಭವಾಗಲಿದೆ. ಸೆ.18ರಂದು ಡ್ರಾ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries