HEALTH TIPS

ಅಯ್ಯಪ್ಪನಷ್ಟೇ ಅಲ್ಲ ರಾಮನೂ ಬೇಕು!: ಕೆ.ಎಸ್.ಆರ್.ಟಿ.ಸಿ.ಯ ನಾಲಂಬಲ ಯಾತ್ರಾ ಸೇವೆಗಳು ಹೆಚ್ಚಿನ ಆದಾಯದ ಗುರಿಯೊಂದಿಗೆ ಆರಂಭ


                ತಿರುವನಂತಪುರ: ಕುಸಿತದ ಅಂಚಿನಲ್ಲಿರುವ ಕೆ.ಎಸ್.ಆರ್.ಟಿ.ಸಿ.ಯ ಆದಾಯ ಹೆಚ್ಚಿಸುವುದು ದೊಡ್ಡ ಸವಾಲಾಗಿದೆ. ಶಬರಿಮಲೆ ಯಾತ್ರೆಯ ಸಮಯದಲ್ಲಿ ಪಂಪಾಕ್ಕೆ ಸೇವೆಯು ಕೆಎಸ್.ಆರ್.ಟಿ.ಸಿ ಆದಾಯವನ್ನು ಹೆಚ್ಚಿಸುತ್ತದೆ. ಕೆಎಸ್‍ಆರ್‍ಟಿಸಿ ಹೆಚ್ಚಿನ ಆದಾಯದ ಗುರಿಯೊಂದಿಗೆ ನಾಲಂಬಲ ವಿಶೇಷ ಯಾತ್ರೆಗೆ ಮುಂದಾಗಿದೆ.  ಹೊಸ ಸೇವೆಗೆ 'ನಾಲಂಬಲ ದರ್ಶನ ತೀರ್ಥಯಾತ್ರೆ 2022' ಎಂದು ಹೆಸರಿಸಲಾಗಿದೆ.

                  ನಾಲಾಂಬಲ ದರ್ಶನಕ್ಕೆ ತೆರಳುವ ಭಕ್ತರನ್ನು ಗುರಿಯಾಗಿಸಿಕೊಂಡು ಎಲ್ಲ ಜಿಲ್ಲೆಗಳಿಂದ ನಾಲಂಬಲ ಸೇವೆ ಒದಗಿಸಲಾಗುವುದು. ರಾಮಾಯಣ ಮಾಸದ ಪ್ರಮುಖ ಹಬ್ಬವಾಗಿರುವ ನಾಲಂಬಲ ದರ್ಶನಕ್ಕೆ ಕೆಎಸ್‍ಆರ್‍ಟಿಸಿ ವಿಸ್ತೃತ ಸೌಲಭ್ಯಗಳನ್ನು ಸಿದ್ಧಪಡಿಸಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ. ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನ, ಇರಿಂಞಲಕುಡ ಕೂಡಲ್ ಮಾಣಿಕ್ಯ ದೇವಸ್ಥಾನ, ತಿರುಮೂಝಿಕುಳಂ ಲಕ್ಷ್ಮಣ ದೇವಸ್ಥಾನ ಮತ್ತು ಪಾಯಮ್ಮಾಳ್ ಶತ್ರುಘ್ನ ದೇವಸ್ಥಾನಗಳಿಗೆ ಮುಖ್ಯವಾಗಿ ನಾಲ್ಕು ನಾಲಂಬಲಂಗಳಿಗೆ ಸೇವೆಗಳನ್ನು ಒದಗಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

                 ಇದರ ಅಂಗವಾಗಿ ಕೆ ಎಸ್ ಆರ್ ಟಿ ಸಿ ಬಜೆಟ್ ಟೂರಿಸಂ ಸೆಲ್ ನೇತೃತ್ವದಲ್ಲಿ ದೇವಸ್ವಂ ಸಹಯೋಗದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ತೀರ್ಥಯಾತ್ರೆ ಹಮ್ಮಿಕೊಳ್ಳುತ್ತಿದೆ. ಜುಲೈ 17 ರಿಂದ ಆಗಸ್ಟ್ 16 ರವರೆಗೆ ತೀರ್ಥಯಾತ್ರೆ ಸೇವೆಗಳು ನಡೆಯಲಿವೆ. ಇದಕ್ಕಾಗಿ ಕೆ ಎಸ್ ಆರ್ ಟಿ ಸಿಯ ವಿವಿಧ ಘಟಕಗಳಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಭಕ್ತರಿಗಾಗಿ ಸಿದ್ಧಪಡಿಸಲಾಗಿದೆ. ಕೆಎಸ್‍ಆರ್‍ಟಿಸಿ ಬಜೆಟ್ ಟೂರಿಸಂ ಸೆಲ್ ನಾಲಂಬಲ ದರ್ಶನದ ಬಗ್ಗೆ ಮಾಹಿತಿಯನ್ನು ಒಳಗೊಂಡ ಡಿಜಿಟಲ್ ಮಾರ್ಗದರ್ಶಿ ಪುಸ್ತಕವನ್ನು ಸಹ ಬಿಡುಗಡೆ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries