ಕಣ್ಣೂರು: ಕಾಡಾನೆಯೊಂದು ರೈತನನ್ನು ತುಳಿದು ಕೊಂದಿರುವ ಘಟನೆ ಅರಳಂ ಫಾರ್ಮ್ ನಲ್ಲಿ ನಡೆದಿದೆ. ಆರಳಂ ಫಾರಂ 7ನೇ ಬ್ಲಾಕ್ ನ ಪಿ.ಎ.ದಾಮು (45) ಮೃತರು. ದಾಮು ಬೆಳಗ್ಗೆ ಸೌದೆ ತರಲು ಹೋದಾಗ ಆನೆ ದಾಳಿ ಮಾಡಿದೆ.
ಈ ಪ್ರದೇಶದಲ್ಲಿ ಆನೆ ಉಳಿದುಕೊಂಡಿದೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆ ಆನೆ ಓಡಿಸಲು ಹರಸಾಹಸ ಪಡುತ್ತಿದೆ.
ಇದೇ ವೇಳೆ ನಿನ್ನೆ ರಾತ್ರಿ ಆನೆಗಳು ಹಿಂಡು ಹಿಂಡಾಗಿ ಬಂದು ಬೆಳೆ ನಾಶ ಮಾಡಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಕೆಲ ತಿಂಗಳ ಹಿಂದೆ ಆನೆಯೊಂದು ಕಾರ್ಮಿಕನನ್ನು ತುಳಿದು ಕೊಂದು ಹಾಕಿತ್ತು.