HEALTH TIPS

ಪುನ್ನಪ್ರಾದ ಡಿವೈಎಫ್‍ಐಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ 19 ವರ್ಷದ ಯುವಕ ರೈಲಿನಡಿಗೆ ಹಾರಿ ಆತ್ಮಹತ್ಯೆ: ಎಂಟು ಜನರ ವಿರುದ್ಧ ಪ್ರಕರಣ


              ಅಲಪ್ಪುಳ: ಪುನ್ನಪ್ರಾದಲ್ಲಿ 19 ವರ್ಷದ ನಂದು ಸಾವಿಗೆ ಡಿವೈಎಫ್‍ಐ ಸದಸ್ಯರೇ ಕಾರಣ ಎಂದು ಪೋಲೀಸರು ಪತ್ತೆ ಮಾಡಿದ್ದಾರೆ.
          ನಂದು ಅವರನ್ನು ಡಿವೈಎಫ್‍ಐ ಸ್ಥಳೀಯ ಮುಖಂಡರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಪೋಲೀಸರು ಪತ್ತೆ ಮಾಡಿದ್ದಾರೆ. ಮಾನಸಿಕ ಖಿನ್ನತೆಯಿಂದ ನಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲೀಸರ ಪ್ರಾಥಮಿಕ ತೀರ್ಮಾನ. ಘಟನೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾರಕಾಯುಧಗಳೊಂದಿಗೆ ಮನೆಗೆ ಬಂದು ಬೆದರಿಕೆ ಹಾಕಿದ್ದ ನಂದು, ನಿದಿನ್ ಥಾಮಸ್, ಸುಮೇಶ್, ವಿಷ್ಣುಪ್ರಸಾದ್, ಇಕ್ರು, ಸಜೀವನ್ ಮತ್ತು ರಾಬಿನ್ ಎಂಬುವವರಿಗೆ ಥಳಿಸಿದ ಮುನ್ನಾ, ಫೈಸಲ್ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
        ಮೊನ್ನೆ ನಂದು ರೈಲಿನ ಮುಂದೆ ಹಾರಿ ಸಾವನ್ನಪ್ಪಿದ್ದ. ಆತ್ಮಹತ್ಯೆ ಎಂದು ಪ್ರಾಥಮಿಕ ವರದಿಯಾಗಿದೆ. ಆದರೆ ಸ್ಥಳೀಯ ಡಿವೈಎಫ್‍ಐ ಮುಖಂಡರ ದೌರ್ಜನ್ಯದಿಂದ ನಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಡಿವೈಎಫ್‍ಐ ಮುಖಂಡರು ನಂದುಗೆ ನಿತ್ಯ ಥಳಿಸುತ್ತಿದ್ದು, ಮನೆಗೆ ಬಂದು ದೊಣ್ಣೆ ಹಿಡಿದು ಬೆದರಿಸುತ್ತಿದ್ದರು ಎಂದು ಸಹೋದರಿ ಹೇಳಿದ್ದಾರೆ. ಅವರು ತಮ್ಮ ಪಕ್ಷ ಅಥವಾ ಆಲೋಚನೆಗಳ ವಿರುದ್ಧ ಕೆಲಸ ಮಾಡುವವರನ್ನು ಗುರಿಯಾಗಿಸಿಕೊಂಡರು. ನಂದು ಇದಕ್ಕೆ ಬಲಿಯಾದವನು ಎಂದು ಬಳಿಕ ಪೋಲೀಸರು ದೃಢಪಡಿಸಿದ್ದಾರೆ.
         ಪಕ್ಷದ ಸದಸ್ಯರ ಕಿರುಕುಳ ತಾಳಲಾರದೆ ನಂದು ರೈಲಿನ ಮುಂದೆ ಜಿಗಿದಿದು ಆತ್ಮಹತ್ಯೆಗೈದ ಎಂದು ತೀರ್ಮಾನಿಸಲಾಗಿದೆ. ಸಾಯುವ ಮುನ್ನ ಮನೆಗೆ ಕರೆ ಮಾಡಿ ಮಾತನಾಡಿದ್ದ. ಡಿವೈಎಫ್‍ಐ ಕಾರ್ಯಕರ್ತರು ಹಿಂಬಾಲಿಸುವ ವೇಳೆ ರೈಲಿಗೆ ಸಿಲುಕಿ ನಂದು ಮೃತಪಟ್ಟಿದ್ದಾರೆ ಎಂದು ಕುಟುಂಬದವರುÀ ದೂರಿದ್ದಾರೆ.  ಆದರೆ ಪೋಲೀಸರು ಇದನ್ನು ಖಚಿತಪಡಿಸಿಲ್ಲ. ಮಾನಸಿಕ ಖಿನ್ನತೆಯಿಂದ ನಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲೀಸರ ಪ್ರಾಥಮಿಕ ವರದಿಯಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries