ಮಂಜೇಶ್ವರ: ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ವತಿಯಿಂದ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಕರ್ಕಟಕ ಮಾಸ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಆ. 9 ಮಂಗಳವಾರದಿಂದ ಆ. 15 ಸೋಮವಾರದ ವರೆಗೆ ಪ್ರತೀದಿನ ಸಂಜೆ 5 ರಿಂದ ಯಕ್ಷಚಿಗುರು – 2022 ತಾಳಮದ್ದಳೆ ಸಪ್ತಾಹ ವಿವಿಧ ತಂಡಗಳಿಂದ ಶ್ರೀಕ್ಷೇತ್ರದಲ್ಲಿ ಜರಗಲಿದೆ.
ಆ. 9 ರಂದು ಸಂಜೆ 4.30 ರಿಂದ ತಾಳಮದ್ದಳೆ ಸಪ್ತಾಹ ಉದ್ಘಾಟನಾ ಸಮಾರಂಭ ಜರಗಲಿದ್ದು ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಸಪ್ತಾಹವನ್ನು ಉದ್ಘಾಟಿಸುವರು. ಶ್ರೀಮಹಾಲಿಂಗೇಶ್ವರ ಸೇವಾಟ್ರಸ್ಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀಯಪದವು ಇತರ ಅಧ್ಯಕ್ಷೆ ಪ್ರೇಮಾ ಕೆ. ಭಟ್ ಅಧ್ಯಕ್ಷತೆ ವಹಿಸಲಿದ್ದು, ಅಭ್ಯಾಗತರಾಗಿ ಅರ್ಥಧಾರಿ ಹರೀಶ ಬಳಂತಿಮೊಗರು ಉಪಸ್ಥಿತರಿರುವರು. ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಇದರ ಅಧ್ಯಕ್ಷ ಗಣೇಶ ನಾವಡ, ಮೀಯಪದವು ಶ್ರೀ ಮಹಾಲಿಂಗೇಶ್ವರ ಸೇವಾಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿರುವರು. ಬಳಿಕ ಯಕ್ಷಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ತಂಡದವರಿಂದ, ಶ್ರೀರಾಮ ಪಟ್ಟಾಭಿμÉೀಕ ತಾಳಮದ್ದಳೆ ಜರಗಲಿದೆ.
ಆ. 10ರಂದು ಸಂಜೆ 5 ಕ್ಕೆ ಯಕ್ಷಬಳಗ ಹೊಸಂಗಡಿ ತಂಡದವರಿಂದ ಪಾದುಕಾ ಪ್ರದಾನ ತಾಳಮದ್ದಳೆ ಜರಗಲಿದೆ. ಆ. 11ರಂದು ಶ್ರೀ ಕಾವೀ ಯಕ್ಷಬಳಗ ವರ್ಕಾಡಿ ತಂಡದವರಿಂದ ಸೀತಾಪಹಾರ ಜಟಾಯು ಮೋಕ್ಷ, 12ರಂದು ಬೆನಕ ಯಕ್ಷಕಲಾವೇದಿಕೆ ಪೈವಳಿಕೆ ತಂಡದವರಿಂದ ವಾಲಿಮೋಕ್ಷ, ಆ. 13ರಂದು ಯಕ್ಷಕಲಾಭಾರತೀ ಮಂಗಲ್ಪಾಡಿ ತಂಡದವರಿಂದ ಇಂದ್ರಜಿತು ಕಾಳಗ ಪ್ರಸಂಗಗಳ ಕೂಟ ಜರಗಲಿದ್ದು ಆ. 14ರಂದು ನಾಡಿನ ಪ್ರಸಿದ್ಧ ಕಲಾವಿದರಿಂದ ರಾವಣ ವಧೆ ತಾಳಮದ್ದಳೆ ಜರಗಲಿದ್ದು ಹಿಮ್ಮೇಳದಲ್ಲಿ ಚನ್ಮಯ ಭಟ್ ಕಲ್ಲಡ್ಕ, ಭಾಸ್ಕರ ಕೋಳ್ಯೂರು ಲವಕುಮಾರ್ ಐಲ, ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾಭಟ್, ಹರೀಶ ಬಳಂತಿಮೊಗರು ಭಾಗವಹಿಸಲಿದ್ದಾರೆ.
15ರಂದು ಸಂಜೆ 4.30ರಿಂದ ಸಮಾರೋಪ ಸಮಾರಂಭ ಜರಗಲಿದ್ದು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಲಿದ್ದು, ಅಭ್ಯಾಗತರಾಗಿ ಪಿ ಆರ್ ಶೆಟ್ಟಿ ಪೆÇಯ್ಯೇಲು, ಶ್ರೀಧರ ರಾವ್ ಆರ್ ಎಂ, ರಾಮಕೃಷ್ಣಮಯ್ಯ ಸಿರಿಬಾಗಿಲು, ಮೋನಪ್ಪ ಶೆಟ್ಟಿ ಕಟ್ನಬೆಟ್ಟು ಭಾಗವಹಿಸುವರು. ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿμÁ್ಠನ ಸಿರಿಬಾಗಿಲು ಸಂಸ್ಥೆಗೆ ಯಕ್ಷಚಿಗುರು ಗೌರವಾರ್ಪಣೆ ಜರಗಲಿದೆ. ಬಳಿಕ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಶ್ರೀರಾಮ ನಿರ್ಯಾಣ ತಾಳಮದ್ದಳೆ ಜರಗಲಿದೆ ಎಂದು ಗುರುನರಸಿಂಹ ಯಕ್ಷಬಳಗದ ಪ್ರಕಟಣೆ ತಿಳಿಸಿದೆ.
ಆ. 9 ರಿಂದ 15 ಚಿಗುರುಪಾದೆಯಲ್ಲಿ “ಯಕ್ಷಚಿಗುರು -2022– ತಾಳಮದ್ದಳೆ ಸಪ್ತಾಹ”
0
August 07, 2022