HEALTH TIPS

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ: ರಸ್ತೆಬದಿ ಹೈಮಾಸ್ಟ್ ದೀಪಗಳ ಬದಲಾಯಿಸಲು ಕ್ರಮ: ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ

    


            ಕಾಸರಗೋಡು  :ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಬದಲಾವಣೆ ಮಾಡಿರುವ ಮಿನಿ ಮತ್ತು ಹೈಮಾಸ್ಟ್ ಲೈಟ್ ಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲು ಜನಪ್ರತಿನಿಧಿಗಳು ಆಗ್ರಹಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಆಗ್ರಹಿಸಲಾಯಿತು. ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ ಅಳವಡಿಸಲಾಗಿರುವ ಮಿನಿ ಮತ್ತು ಹೈಮಾಸ್ಟ್ ದೀಪಗಳನ್ನು ಬದಲಾಯಿಸುವಾಗ ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡುವುದಾಗಿ ತಿಳಿಸಲಾಯಿತು.
              ಲೈಫ್ ಯೋಜನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಕಂಪನಿಯು ಬಂಡಿಚಾಲ್ ಫ್ಲಾಟ್‍ಗಳ ನಿರ್ಮಾಣದ ಗುತ್ತಿಗೆಯನ್ನು ತೆಗೆದುಕೊಂಡಿದ್ದು,  ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ನವಕೇರಳ ಮಿಷನ್‍ನ ಜಿಲ್ಲಾ ಸಂಯೋಜಕರು ಮಾಹಿತಿ ನೀಡಿದರು. ಒಂದು ವಾರದೊಳಗೆ ಟಾಟಾ ಆಸ್ಪತ್ರೆಯ ಜಾಗವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಸಹಾಯಕ ಜಿಲ್ಲಾಧಿಕಾರಿ (ಎಲ್‍ಆರ್) ಮಾಹಿತಿ ನೀಡಿದರು. ಭೂರಹಿತ ಪರಿಶಿಷ್ಟ ಪಂಗಡಗಳ ಪುನರ್ವಸತಿ ಭಾಗವಾಗಿ ಬುಡಕಟ್ಟು ಪುನರ್ವಸತಿ ಅಭಿವೃದ್ಧಿ ಮಿಷನ್ (ಟಿಆರ್‍ಡಿಎಂ) ಸಭೆ ನಡೆಸಿ, ಕಾಸರಗೋಡು ಪರಿಶಿಷ್ಟ ಪಂಗಡದ ಅಭಿವೃದ್ಧಿ ಅಧಿಕಾರಿ, ಪರಿಶಿಷ್ಟ ಪಂಗಡಗಳ ಭೂಮಿ ಸಂಬಂಧಿತ ಸಮಸ್ಯೆಗಳ ಕುರಿತು ಚರ್ಚಿಸಿದರು. ಭೂಮಾಲೀಕರಿಂದ ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನ ಹಂಚಿಕೆಗೆ ಆಯ್ಕೆಯಾದವರಿಗೆ ನಿರಾಕ್ಷೇಪಣಾ ಪತ್ರ ನೀಡಿದವರ ಬದಲಿಗೆ ಹಕ್ಕು ಪತ್ರ ಪಡೆದಿರುವ 150 ಮಂದಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಯಿತು.
                                ಬೀದಿನಾಯಿ ನಿಯಂತ್ರಣಕ್ಕೆ ಕ್ರಮ:
            ಬೀದಿನಾಯಿಗಳ ಉಪಟಳಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳು ಎಬಿಸಿ ಯೋಜನೆಗೆ ಕೊಡುಗೆ ನೀಡುತ್ತಿದ್ದು, 2021-22ನೇ ಸಾಲಿನಲ್ಲಿ 2152 ಬೀದಿನಾಯಿಗಳಿಗೆ ಕ್ರಿಮಿನಾಶಕ ಮಾಡಲಾಗಿದ್ದು, ಈವರೆಗೆ 144 ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. 2021-22 ರ ಆರ್ಥಿಕ ವರ್ಷದಲ್ಲಿ ಕಾಸರಗೋಡು ಮತ್ತು ತ್ರಿಕರಿಪುರ ಎಬಿಸಿ ಕೇಂದ್ರಗಳಲ್ಲಿ 59.50 ಲಕ್ಷ ರೂ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಮೊತ್ತ ಮೀಸಲಿರಿಸಿದೆ.
              ಇದೇ ಸಂದರ್ಭ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸ್ಥಗಿತಗೊಂಡಿರುವ ರಾತ್ರಿ ಕಾಲ ಶವಮಹಜರು ಪರೀಕ್ಷೆಯನ್ನು ಪುನರಾರಂಭಿಸುವಂತೆ ಶಾಸಕ ಎನ್.ಎ.ನೆಲ್ಲಿಕುಂಞ ಒತ್ತಾಯಿಸಿದರು. ಸಾಮಾನ್ಯ ಅಪಘಾತದ ಸಾವುಗಳು ಸಂಭವಿಸಿದಲ್ಲಿ ಕರ್ತವ್ಯ ವೈದ್ಯಾಧಿಕಾರಿಗಳೇ ಮರಣೋತ್ತರ ಪರೀಕ್ಷೆ ನಡೆಸಿದರೆ ಸಾಕು ಎಂಬ ಅಂಶವೂ ಗಮನಕ್ಕೆ ಬಂದಿದೆ. ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲಾಗುವುದು ಎಂದು ಡಿಎಂಒ ತಿಳಿಸಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries