HEALTH TIPS

ಮೂಲೆ ಮೂಲೆಗಳಲ್ಲೂ ಮಸೀದಿ ಇರಬೇಕೆಂದು ಕುರಾನ್ ಹೇಳುವುದಿಲ್ಲ: ಕಟ್ಟಡಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್


               ಕೊಚ್ಚಿ: ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಧಾರ್ಮಿಕ ಆರಾಧನಾಲಯಗಳಿಂದ ತುಂಬಿ ತುಳುಕುತ್ತಿದೆ ಎಂದು ಹೈಕೋರ್ಟ್ ಹೇಳಿದೆ.
              ರಾಜ್ಯದಲ್ಲಿ ಈಗಾಗಲೇ ಹಲವು ಪೂಜಾ ಸ್ಥಳಗಳಿದ್ದು, ಅವುಗಳ ಸಂಖ್ಯೆ ತುಂಬಾ ಹೆಚ್ಚಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಕಟ್ಟಡವನ್ನು ಪ್ರಾರ್ಥನಾ ಸ್ಥಳವನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಪಿ.ವಿ.ಕುಂಞÂ್ಞ ಕೃಷ್ಣನ್ ಈ ಸ್ಪಷ್ಟನೆ ನೀಡಿದ್ದಾರೆ.
          ಮುಸ್ಲಿಂ ಸಮುದಾಯದಲ್ಲಿ ಮಸೀದಿಗಳ ಮಹತ್ವವನ್ನು ಕುರಾನ್ ನಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಸ್ಥಳಗಳ ಮೂಲೆ ಮೂಲೆಯಲ್ಲೂ ಮಸೀದಿ ಕಟ್ಟಬೇಕು ಎಂದು ಕುರಾನ್ ಹೇಳುವುದಿಲ್ಲ. ಪ್ರತಿಯೊಬ್ಬ ಮುಸಲ್ಮಾನೂ ತನ್ನ ಮನೆಯ ಬಳಿ ಮಸೀದಿಯನ್ನು ಹೊಂದಿರಬೇಕು ಎಂದು ಹದೀಸ್ ಅಥವಾ ಕುರಾನ್ ಹೇಳುವುದಿಲ್ಲ. ಮಸೀದಿಯ ಅಂತರವಲ್ಲ, ಅಲ್ಲಿಗೆ ಹೋಗುವುದು ಮುಖ್ಯ ಎಂದು ಹೇಳಿದರು.
          ಕೇರಳದ ಭೌಗೋಳಿಕ ವೈಶಿಷ್ಟ್ಯಗಳಿಂದಾಗಿ, ರಾಜ್ಯವನ್ನು "ದೇವರ ಸ್ವಂತ ನಾಡು" ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಅನೇಕ ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳು ಪ್ರಾಚೀನ ಕಾಲಗಳಿಂದ ಇವೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಹೊಸ ಪೂಜಾ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಪಿವಿ ಕುಂಞÂ್ಞ ಕೃಷ್ಣನ್ ಹೇಳಿದರು.
           ಅರ್ಜಿದಾರರು ಕೋರಿರುವ ಪ್ರದೇಶದಲ್ಲಿ 36 ಮಸೀದಿಗಳಿರುವುದರಿಂದ ಬೇರೆ ಪೂಜಾ ಸ್ಥಳದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries