ಮಂಜೇಶ್ವರ: ಡೈರಿ ಅಭಿವೃದ್ಧಿ ಇಲಾಖೆ ಮತ್ತು ಮಂಜೇಶ್ವರ ಬ್ಲಾಕ್ ಡೈರಿ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರ ಬ್ಲಾಕ್ ಡೈರಿ ಸಂಗಮ ಆಯೋಜಿಸಲಾಗಿತ್ತು. ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಡೇರಿ ಕೂಟದ ಅಂಗವಾಗಿ ಜಾನುವಾರು ಪ್ರದರ್ಶನ, ಹೈನುಗಾರರಿಗೆ ಅಭಿನಂದನೆ, ವಸ್ತುಪ್ರದರ್ಶನ ಹಾಗೂ ವಿವಿಧ ತರಗತಿಗಳು ನಡೆದವು.
ಬ್ಲಾಕ್ನಲ್ಲಿ ಅತಿ ಹೆಚ್ಚು ಹಾಲು ಮಾಪನ ಮಾಡಿದ ತಂಡ, ಬ್ಲಾಕ್ನ ಹಿರಿಯ ಹೈನುಗಾರ, ಹೆಚ್ಚು ಹಾಲು ಅಳತೆ ಮಾಡಿದ ಯುವ ರೈತ, ಹೆಚ್ಚು ಹಾಲು ಅಳತೆ ಮಾಡಿದ ರೈತ ಮಹಿಳೆ ಇತ್ಯಾದಿ ವಿಭಾಗದಲ್ಲಿ ಗೌರವಾರ್ಪಣೆ ನಡೆಯಿತು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಸುಬ್ಬಣ್ಣ ಆಳ್ವ, ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಜೆ.ಎಸ್.ಸೋಮಶೇಖರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಪಿ.ಕೆ ಮುಹಮ್ಮದ್ ಹನೀಫ್, ಕಾಸರಗೋಡು ಹೈನುಗಾರಿಕೆ ಇಲಾಖೆ ಉಪನಿರ್ದೇಶಕ ಎನ್. ವೀಣಾ ಹಾಗೂ ಪುತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಕೆ.ಕಾವ್ಯಶ್ರೀ, ಜಯಂತಿ, ಎಸ್.ಅನಿತಾಶ್ರೀ ಮತ್ತಿತರರು ಮಾತನಾಡಿದರು. ನಂತರ ಹೈನುಗಾರಿಕೆ ಕ್ಷೇತ್ರದ ಇತ್ತೀಚಿನ ಚಟುವಟಿಕೆಗಳು, ಜಾನುವಾರು ರೋಗ ಪತ್ತೆ ಮತ್ತು ಅದರ ತಡೆಗಟ್ಟುವ ವಿಧಾನಗಳ ಕುರಿತು ತರಗತಿ ನಡೆಸಲಾಯಿತು. ಎಡನಾಡು ಕ್ಷೀರಸಂಘದ ಅಧ್ಯಕ್ಷ ಶಂಕರನಾರಾಯಣ ರಾವ್ ಸ್ವಾಗತಿಸಿ, ಮಂಜೇಶ್ವರದ ಡೈರಿ ಅಭಿವೃದ್ಧಿ ಅಧಿಕಾರಿ ಎಸ್.ಅಜಯನ್ ವಂದಿಸಿದರು.
.