HEALTH TIPS

ಹಿಂದೂ ಧರ್ಮ-ಸಂಸ್ಕøತಿಯನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ: ರೇವತಿ ಟೀಚರ್ ಕುಚ್ಚಿಕ್ಕಾಡ್


             ಉಪ್ಪಳ: ಸನಾತನ ಹಿಂದೂ ಸಂಸ್ಕøತಿ ಜಗತ್ತಿಗೆ ಮಾದರಿ. ಪ್ರಸ್ತುತ ಹಿಂದೂ ಧರ್ಮ, ಸಮಾಜದ ವಿರುದ್ದ ನಡೆಯುತ್ತಿರುವ ಅಧರ್ಮವನ್ನು ನಿಯಂತ್ರಿಸಲು ಶ್ರೀಕೃಷ್ಣ ಭಗವಾನÀನು ಮತ್ತೆ-ಮತ್ತೆ ಅವತರಿಸುತ್ತಾನೆ. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮವನ್ನು ಯಾರನ್ನೂ ನಾಶಗೊಳಿಸಲು, ಆಘಾತಗೊಳಿಸಲು ಸಾಧ್ಯವಿಲ್ಲ ಎಂದು ಶಿಕ್ಷಕಿ ರೇವತಿ ಟೀಚರ್ ಕುಚ್ಚಿಕ್ಕಾಡ್ ತಿಳಿಸಿದರು.



    ಪೈವಳಿಕೆ ಸಮೀಪದ ಜೋಡುಕಲ್ಲು ಸೇವಾಭಾರತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ  ಆಯೋಜಿಸಿದ್ದ 32ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣಗೈದು ಮಾತನಾಡಿದರು.


     ಜಗದೀಶ ಸುವರ್ಣ ಬೇಕೂರು ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ರೈ ಕಳ್ಳಿಗೆ, ಸೇವಾ ಭಾರತಿ ಜೋಡುಕಲ್ಲು ಸಮಿತಿ ಅಧ್ಯಕ್ಷ ದಾಮೋದರ ಉಬರಳೆ ಉಪಸ್ಥಿತರಿದ್ದರು.
      ಶ್ರೀಕೃಷ್ಣ-ರಾಧೆ ಮತ್ತು ಕಣಿತ ಭಜನೆಯೊಂದಿಗೆ ಆಕರ್ಷಕ ಶೋಭಾಯಾತ್ರೆ ಸುಭಾಶ್ ನಗರದಿಂದ ಜೋಡುಕಲ್ಲು ತಪೋವನದವರೆಗೆ ನಡೆಯಿತು. ವಿವಿಧ ಹೊರಾಂಗಣ ಮತ್ತು ಒಳಾಂಗಣ ಸ್ಪರ್ಧೆಗಳು ಜರಗಿತು. ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.  


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries