HEALTH TIPS

ಸ್ವತಂತ್ರ ಭಾರತದ ಕಥೆ ಹೇಳುವ 'ಇಂಡಿಯಾ ಕಿ ಉಡಾನ್‌' ಅನಾವರಣ

 

            ನವದೆಹಲಿ: ಸ್ವತಂತ್ರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗೂಗಲ್‌ ಸಂಸ್ಥೆಯು 'ಇಂಡಿಯಾ ಕಿ ಉಡಾನ್‌' ಎಂಬ ಆನ್‌ಲೈನ್‌ ಕಾರ್ಯಕ್ರಮ ಅನಾವರಣಗೊಳಿಸಿದೆ.

                   ಗೂಗಲ್‌ನ ಕಲಾ ಮತ್ತು ಸಾಂಸ್ಕೃತಿಕ ವಿಭಾಗ ಈ ಯೋಜನೆ ಕೈಗೊಂಡಿದೆ.

ಸ್ವಾತಂತ್ರ್ಯ ದೊರೆತ ನಂತರ ದೇಶ ಸ್ಥಾಪಿಸಿರುವಂತಹ ಮಹತ್ವದ ಮೈಲಿಗಲ್ಲುಗಳನ್ನು ಸಚಿತ್ರ ವಿವರಣೆಯೊಂದಿಗೆ ಮೆಲುಕು ಹಾಕುವುದು ಇದರ ಉದ್ದೇಶ.‌

                    'ಕೇಂದ್ರ ಸರ್ಕಾರದ 'ಆಜಾದಿ ಕಿ ಅಮೃತ ಮಹೋತ್ಸವ' ಕಾರ್ಯಕ್ರಮಕ್ಕೆ ಕೈಜೋಡಿಸುವ ಸಲುವಾಗಿ ಈ ಯೋಜನೆ ಕೈಗೊಳ್ಳಲಾಗಿದೆ. 1947ರ ನಂತರ ಭಾರತವು ವಿಕಸನಗೊಂಡ ಬಗೆ, ಇದಕ್ಕೆ ಕೊಡುಗೆ ನೀಡಿದ ಮಹಾನೀಯರ ಕುರಿತ ವಿವರಗಳನ್ನು 'ಇಂಡಿಯಾ ಕಿ ಉಡಾನ್‌' ಒಳಗೊಂಡಿರಲಿದೆ. ಒಟ್ಟಾರೆಯಾಗಿ ಸ್ವತಂತ್ರ ಭಾರತದ ಕಥೆ ಹೇಳುವುದು ಇದರ ಉದ್ದೇಶ' ಎಂದು ಗೂಗಲ್‌ ತಿಳಿಸಿದೆ.

                     'ಡೂಡಲ್‌4ಗೂಗಲ್‌'-2022 ಸ್ಪರ್ಧೆಗೂ ಶುಕ್ರವಾರ ಚಾಲನೆ ನೀಡಲಾಗಿದೆ.

                'ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ' ಎಂಬ ವಿಷಯದಡಿ ಸ್ಪರ್ಧೆ ನಡೆಸಲಾಗುತ್ತಿದ್ದು, 1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬಹುದು. ವಿಜೇತರಿಗೆ ₹5 ಲಕ್ಷ ವಿದ್ಯಾರ್ಥಿವೇತನ ಹಾಗೂ ಅವರು ವ್ಯಾಸಂಗ ಮಾಡುತ್ತಿರುವ ಶಾಲೆ ಅಥವಾ ಸಂಸ್ಥೆಗೆ ₹2 ಲಕ್ಷ ತಾಂತ್ರಿಕ ನೆರವು ನೀಡಲಾಗುತ್ತದೆ. ವಿಜೇತರು ರಚಿಸಿರುವ ಕಲಾಕೃತಿಯು ನವೆಂಬರ್‌ 14ರಂದು ಗೂಗಲ್‌ ಹೋಂ ಪೇಜ್‌ನಲ್ಲಿ (ಭಾರತ) ಪ್ರಕಟವಾಗಲಿದೆ. ಗುಂಪು ಹಂತದ ನಾಲ್ವರು ವಿಜೇತರಿಗೆ ಹಾಗೂ ಫೈನಲ್‌ ಪ್ರವೇಶಿಸುವ 15 ಮಂದಿಗೆ ಆಕರ್ಷಕ ಬಹುಮಾನಗಳು ದೊರೆಯಲಿವೆ' ಎಂದೂ ಗೂಗಲ್‌ ಮಾಹಿತಿ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries