HEALTH TIPS

'ಚೌಕಿದಾರ್ ಚೋರ್ ಹೈ' ಅಭಿಯಾನದಿಂದ ಹಿರಿಯ ಕಾಂಗ್ರೆಸ್ ನಾಯಕರಿಗೆ ಅಸಮಾಧಾನ: ಗುಲಾಂ ನಬಿ ಆಝಾದ್

                  ವದೆಹಲಿ:2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿಯವರು ಆರಂಭಿಸಿದ "ಚೌಕಿದಾರ್ ಚೋರ್ ಹೈ" ಅಭಿಯಾನವು ಅನೇಕ ಕಾಂಗ್ರೆಸ್ ಹಿರಿಯ ನಾಯಕರನ್ನು ಅಸಮಾಧಾನಗೊಳಿಸಿತ್ತು ಎಂದು ಕಳೆದ ವಾರ ಪಕ್ಷವನ್ನು ತೊರೆದ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

                ಚುನಾವಣಾ ಪ್ರಚಾರದ ಸಮಯದಲ್ಲಿ ʼಚೌಕಿದಾರ್‌ ಚೋರ್‌ ಹೈʼ ಎಂಬ ಘೋಷಣೆ ಪರವಾಗಿರುವವರು ಕೈ ಎತ್ತಿ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಕೇಳಿದರು. ಈ ವೇಳೆ ಆಝಾದ್‌ ಸೇರಿದಂತೆ ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಎಕೆ ಆಂಟನಿ, ಪಿ ಚಿದಂಬರಂ ಮೊದಲಾದವರು ಉಪಸ್ಥಿತರಿದ್ದರು ಎಂದು ಗುಲಾಂ ನಬಿ ಆಝಾದ್‌ ಹೇಳಿದ್ದಾರೆ, .

                ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್ ಅವರ ಸಂಪುಟದಲ್ಲಿದ್ದ ಹಾಗೂ ಮುಖ್ಯಮಂತ್ರಿಗಳಾಗಿದ್ದ ಎಷ್ಟೋ ಹಿರಿಯರು ಇದನ್ನು ಪ್ರಶ್ನಿಸಿದ್ದರು. ʼನೀವು ಹೇಗೆ ಇದನ್ನು ನಿರೀಕ್ಷಿಸುತ್ತೀರಿ? ಈ ಭಾಷೆಯನ್ನು ಸಾರ್ವಜನಿಕವಾಗಿ ಬಳಸಬಹುದೇ? ನಾವು ಬಲ, ಎಡ ಮತ್ತು ಮಧ್ಯಮ (ಪಂಥದ) ಯಾರನ್ನಾದರೂ ವಿರೋಧಿಸಬಹುದು, ಆದರೆ ವೈಯಕ್ತಿಕವಾಗಿ ಆಕ್ರಮಣ ಮಾಡಬಾರದುʼ ಎಂದು ಹಿರಿಯ ನಾಯಕರು ಪ್ರಶ್ನಿಸಿದ್ದರು.

                      ತಮ್ಮಂತಹ ರಾಜಕಾರಣಿಗಳು ಎದುರಾಳಿಗಳ ಮೇಲೆ ವೈಯಕ್ತಿಕ ದಾಳಿ ನಡೆಸುವುದನ್ನು ಯೋಚಿಸಲಾಗದು ಎಂದು ಆಝಾದ್ ಹೇಳಿದ್ದಾರೆ.

                 "ನಾವು ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ರಾಜಕೀಯ ಶಿಕ್ಷಣವನ್ನು ಪಡೆದಿದ್ದೇವೆ. ನಾನು ಕಿರಿಯ ಸಚಿವರಾಗಿದ್ದಾಗ ಅವರು ಎಂಎಲ್ ಫೋತೇದಾರ್ ಮತ್ತು ನನ್ನನ್ನು ಕರೆದು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಬೇಕು ಎಂದು ಇಂದಿರಾ ಗಾಂಧಿ ಹೇಳಿದರು. ನಾಯಕರ ನಡುವಿನ ವ್ಯತ್ಯಾಸವನ್ನು ನೋಡಿ. ಅಟಲ್ ಜಿ ಕೂಡ ರಾಜಕಾರಣಿ, ಅವರು ಕೆಲಸ ಹೇಗೆ ನಡೆಯುತ್ತದೆ, ಹೇಗೆ ಮಾಡಬೇಕು ಎಂದು ಅವರು (ಅಟಲ್)‌ ಕೂಡಾ ನೋಡಬೇಕು ಎಂದು ಇಂದಿರಾಗಾಂಧಿ ಹೇಳಿದರು. ಕೆಲಸ ಮಾಡುವುದನ್ನು ನೋಡಲು (ಅಟಲ್) ಸಹ ಬಯಸುತ್ತಾರೆ, ಆದರೆ, ಅವರು ನಮ್ಮೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ, ಆದ್ದರಿಂದ ನೀವು ಅವರನ್ನು ಹೋಗಿ ಭೇಟಿಯಾಗಿ, ನಾವು ನಮ್ಮ ಹಿರಿಯರನ್ನು ಗೌರವಿಸುವ ಮತ್ತು ವಿರೋಧ ಪಕ್ಷದ ನಾಯಕರಿಗೆ ಸಮಾನ ಗೌರವವನ್ನು ನೀಡುವ ಬಗ್ಗೆ ಅವರಿಗೆ ತಿಳಿಸಿ ಎಂದರು. ಸಾರ್ವಜನಿಕವಾಗಿ ಪಿಎಂ ಚೋರ್‌ ಹೈ (ಪ್ರಧಾನಿ ಕಳ್ಳ) ಎಂದು ಹೇಳಲು ನಮಗೆ ಕಲಿಸಲಿಲ್ಲ. ರಾಜಿನಾಮೆ ನೀಡಲು ಇದೂ ಕೂಡಾ ಒಂದು ಕಾರಣ ಎಂದು ಆಝಾದ್‌ ಹೇಳಿರುವುದಾಗಿ ndtv.com ವರದಿ ಮಾಡಿದೆ.

              "ನಾವು ಮೋದಿಯನ್ನು ಬಲ, ಎಡ ಮತ್ತು ಮಧ್ಯದಲ್ಲಿ ಆಕ್ರಮಣ ಮಾಡಬಹುದು, ಆದರೆ ನಾವು ಈ ರೀತಿ ವೈಯಕ್ತಿಕವಾಗಿ ಹೋಗಬಾರದು? ಇದು ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಬಳಸಬೇಕಾದ ಭಾಷೆಯೇ?" ಎಂದು ಆಝಾದ್‌ ಪ್ರಶ್ನಿಸಿದ್ದಾರೆ,

              2013 ರ ಸುಗ್ರೀವಾಜ್ಞೆಯನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಹರಿದು ಹಾಕುವ ರಾಹುಲ್‌ ಗಾಂಧಿ ಕೃತ್ಯವನ್ನು ಬಾಲಿಶ ನಡವಳಿಕೆ ಮತ್ತು ಅವರ ಅಪ್ರಬುದ್ಧತೆಗೆ ಒಂದು ಜ್ವಲಂತ ಉದಾಹರಣೆ ಎಂದು ಆಝಾದ್‌ ಈ ಹಿಂದೆ ಹೇಳಿದ್ದರು.

              "ಆ ನಡೆಯು ಪ್ರಧಾನಿ (ಮನಮೋಹನ್ ಸಿಂಗ್) ಮತ್ತು ಇಡೀ ಸಂಪುಟದ ಅಧಿಕಾರವನ್ನು ಕಸಿದುಕೊಂಡಿದೆ. ಸುಗ್ರೀವಾಜ್ಞೆಗಳನ್ನು ಹೇಗೆ ಹೊರಡಿಸಲಾಗುತ್ತದೆ ಎಂದು ರಾಹುಲ್‌ಗೆ ಇಂದಿಗೂ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ' ಎಂದು ಆಝಾದ್ ಟೀಕಿಸಿದ್ದರು.

             ಸೋನಿಯಾ ಗಾಂಧಿಯವರು ತಮ್ಮ ಮಗ ಏನು ಮಾಡುತ್ತಿದ್ದಾರೆಂದು ತಿಳಿದಿದ್ದರು ಆದರೆ ಸಂಪೂರ್ಣವಾಗಿ ಅವರು ರಾಹುಲ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ಆಝಾದ್ ಹೇಳಿದರು. ಎಲ್ಲಾ ತಾಯಂದಿರು ಹಾಗೆ. ಎಲ್ಲಾ ತಾಯಂದಿರು, ನನ್ನ ತಾಯಿ ಇರಲಿ, ನಿಮ್ಮ ತಾಯಿ ಇರಲಿ, ತಮ್ಮ ಮಕ್ಕಳ ಒಂದು ದೌರ್ಬಲ್ಯವನ್ನು ಹೊಂದಿರುತ್ತಾರೆ ಎಂದು ಆಝಾದ್‌ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries