ಎರ್ನಾಕುಳಂ: ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಇಡಮಲಯಾರ್ ಅಣೆಕಟ್ಟಿನ ಶೆಟರ್ ಗಳನ್ನು ಮೇಲಕ್ಕೆತ್ತಲಾಗಿದೆ. ಅಣೆಕಟ್ಟಿನ ಎರಡು ಶಟರ್ಗಳನ್ನು ತಲಾ 50 ಸೆಂ.ಮೀ ತೆರೆಯಲಾಗಿದೆ.
ಅಣೆಕಟ್ಟಿನಿಂದ ಹೆಚ್ಚಿನ ನೀರು ಬಿಡುಗಡೆಯ ಸಂದರ್ಭದಲ್ಲಿ ಪೆರಿಯಾರ್ ನಲ್ಲಿ ಅತ್ಯಂತ ಜಾಗರೂಕರಾಗಿರಲು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಜೋರಾಗಿದೆ. ಅಣೆಕಟ್ಟೆಗೆ ನೀರಿನ ಒಳಹರಿವು ಮತ್ತು ಜಿಲ್ಲೆಯಲ್ಲಿ ಮಳೆಯ ಎಚ್ಚರಿಕೆಯನ್ನು ಪರಿಗಣಿಸಿ ಇಡಮಲಯಾರ್ ಅಣೆಕಟ್ಟಿನ ಶೆಟರ್ಗಳನ್ನು ಮೇಲಕ್ಕೆತ್ತಲಾಗಿದೆ. 50 ರಿಂದ 100 ಸೆಂ.ಮೀ ವರೆಗೆ ಶೆಟರ್ ಗಳನ್ನು ಎತ್ತರಿಸಿ 68 ರಿಂದ 131 ಕ್ಯೂಮೆಕ್ಸ್ ನೀರನ್ನು ಹೊರ ಬಿಡಲು ನಿರ್ಧರಿಸಲಾಗಿದೆ.
ಸದ್ಯ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 164.05 ಇದೆ. ನೀರಿನ ಮಟ್ಟ 164 ಮೀಟರ್ಗೆ ತಲುಪಿದಾಗ ಅಣೆಕಟ್ಟಿನ ಶೆಟರ್ಗಳನ್ನು ತೆರೆಯಲಾಯಿತು. ಅಣೆಕಟ್ಟು ತೆರೆಯುವ ಸಂದರ್ಭದಲ್ಲಿ ಪೆರಿಯಾರ್ ದಡದ ಜನರು ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ರೇಣುರಾಜ್ ತಿಳಿಸಿದರು. ನದಿ ದಾಟಲು, ನದಿಯಲ್ಲಿ ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ನಿμÉೀಧ ಹೇರಲಾಗಿದೆ. ಪೆರಿಯಾರ್ ಮತ್ತು ಅದರ ಉಪನದಿಗಳಲ್ಲಿ ಬಲವಾದ ಒಳಹರಿವು ಇರುವುದರಿಂದ ಸ್ನಾನ ಮಾಡದಂತೆ ಅಥವಾ ಬಟ್ಟೆ ಒಗೆಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಎಡಮಲಯಾರ್ ಅಣೆಕಟ್ಟು ತೆರೆದುಬಿಟ್ಟು ಪ್ರವಾಹ ನಿಯಂತ್ರಣಕ್ಕೆ ಯತ್ನ: ಎಚ್ಚರಿಕೆ ಸೂಚನೆ
0
August 29, 2022