HEALTH TIPS

ಮಳೆ ದುರಂತ: ರಾಜ್ಯದ ವಿವಿಧೆಡೆ ಭೂಕುಸಿತ; ಒಂದು ಮಗು ನಾಪತ್ತೆ: ಮಟ್ಟ ಮೀರಿ ಹರಿಯುತ್ತಿರುವ ನದಿಗಳು

             
               ಕಣ್ಣೂರು: ಭಾರೀ ಮಳೆಗೆ ಜಿಲ್ಲೆಯ ವಿವಿಧೆಡೆ ಭೂಕುಸಿತ ಸಂಭವಿಸಿದೆ. ಇಪ್ಪತ್ನಾಲ್ಕನೇ ಮೈಲಿಯಲ್ಲಿ, ಪುಲಕುಟ್ಟಿ ತಿಡಿಯಾಡಂನಲ್ಲಿ ಭೂಕುಸಿತ ಸಂಭವಿಸಿದೆ.
           ಪೆರವೂರ್‍ನ ವೆಲ್ಲರ ಕಾಲೋನಿಯಲ್ಲಿ ಮಗುವೊಂದು ನಾಪತ್ತೆಯಾಗಿದೆ. ಮನೆ ಕುಸಿದು ಬಿದ್ದ ಬಳಿಕ  ಮಗು ನಾಪತ್ತೆಯಾಗಿದೆ. ನೆಡುಂಪುರ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.
               ವಯನಾಡು ಗಡಿಗೆ ಹೊಂದಿಕೊಂಡಿರುವ ಕಣ್ಣೂರಿನ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದೆ. ಪಾಸ್ ಮೂಲಕ ವಾಹನ ಸಂಚಾರ ನಿಬರ್ಂಧಿಸಲಾಗಿದೆ.ಕಂಜಿರಪುಳ ಮತ್ತು ನೆಲ್ಲನಿಕಲ್ ನದಿ ತುಂಬಿ ಹರಿಯುತ್ತಿದೆ. ನಾಲ್ಕು ಕುಟುಂಬಗಳು ಅತಂತ್ರವಾಗಿದೆ  ಎಂಬುದು ಅಧಿಕೃತ ದೃಢೀಕರಣ.       ಮರ್ಮಲ ಹೊಳೆ ಪ್ರದೇಶದಲ್ಲಿ ತಿಕೊಯ್ ಭೂಕುಸಿತ ಉಂಟಾಗಿದೆ. ವಸತಿ ಪ್ರದೇಶದಲ್ಲಿ ಸಂಭವಿಸಿಲ್ಲ. ಯಾವುದೇ ಪ್ರಾಣಹಾನಿಯಾಗಿಲ್ಲ. ಮಳೆಯ ಆರ್ಭಟ ಮುಂದುವರಿದಿದ್ದು, ಮೀನಾಚದಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಂಭವವಿದ್ದು, ಎಳಪೇಟಿಕಾದಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಕಣಿಚಾರ್ ಪಂಚಾಯತ್ ನಾಲ್ಕು ಮನೆಗಳನ್ನು ಸ್ಥಳಾಂತರಿಸಿದೆ. ಕೆಳಕಂ ಪಂಚಾಯತ್‍ನ ಕಂಡಂತೋಡ್‍ನಲ್ಲಿ ಭೂಕುಸಿತ ಸಂಭವಿಸಿದ್ದು, ಎರಡು ಕುಟುಂಬಗಳು ಸ್ಥಳಾಂತರಗೊಂಡಿವೆ. ನೆಟುಂಪೆÇಯಿಲ್‍ನ ಕನ್ನವಂ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಚೆಕ್ಯೇರಿ ಕಾಲೋನಿಯ ನಾಲ್ಕು ಕುಟುಂಬಗಳು ಪ್ರತ್ಯೇಕಗೊಂಡಿದ್ದು, ನಂತರ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
          ಪತ್ತನಂತಿಟ್ಟ ರಾನ್ನಿಯಲ್ಲಿ ಪಂಪಾನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಚಾವಕ್ಕಾಡ್ ನದೀಮುಖದಲ್ಲಿ ದೋಣಿ ಪಲ್ಟಿಯಾಗಿ ಮೂವರು ನಾಪತ್ತೆಯಾಗಿದ್ದಾರೆ. ಸಂತೋμï, ಮಣಿಯನ್ ಮತ್ತು ಗಿಲ್ಬರ್ಟ್ ನಾಪತ್ತೆಯಾಗಿದ್ದಾರೆ. ಮೂವರು ಬದುಕುಳಿದಿದ್ದಾರೆ. ಸ್ಥಳಕ್ಕೆ ಕೋಸ್ಟ್ ಗಾರ್ಡ್ ತಂಡ ತೆರಳಿದೆ. ರಾತ್ರಿಯಿಡೀ ಶೋಧ ಕಾರ್ಯ ಮುಂದುವರಿದಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries