ಚೆನ್ನೈ: ಎನ್ಐಎ ದಾಳಿ ಬಳಿಕ ಬಂಧಿತ ಪಾಪ್ಯುಲರ್ ಫ್ರಂಟ್ ಉಗ್ರರನ್ನು ಬಿಡುಗಡೆ ಮಾಡಲು ಕಪ್ಪುಹಣವನ್ನು ಕೇರಳಕ್ಕೆ ತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳಕ್ಕೆ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಹತ್ತು ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣದೊಂದಿಗೆ ನಾಲ್ವರನ್ನು ಇಂದು ಬಂಧಿಸಲಾಗಿದೆ.
ನಿಸಾರ್, ವಸೀಂ ಅಕ್ರಮ್, ಸರ್ಬುದಿನ್ ಮತ್ತು ನಾಸರ್ ಬಂಧಿತ ಆರೋಪಿಗಳು. ಪೋಲೀಸರ ಪ್ರಕಾರ, ಈ ಗುಂಪಿನಲ್ಲೊಬ್ಬನಾದ ನಿಸಾರ್ ಅಹಮದ್ ಭಯೋತ್ಪಾದಕರಿಗೆ ಹಣ ಒದಗಿಸುವ ಗುಂಪಿನ ಪ್ರಮುಖ ಕೊಂಡಿ.
ಬಟ್ಟೆ ವ್ಯಾಪಾರದ ನೆಪದಲ್ಲಿ ಕಳ್ಳಸಾಗಣೆ ಮಾಡಿ ಹಣ ಲಪಟಾಯಿಸುತ್ತಿದ್ದ. ಅವರು ಚೆನ್ನೈನ ಮನ್ನಾಡಿಯಲ್ಲಿ ಸಮೀರಾ ಎಂಬ ಹೆಸರಿನ ಕರ್ಟನ್ ಅಂಗಡಿ ಮತ್ತು ತಿರುವನಂತಪುರದ ಊಟುಕುಳಿಯಲ್ಲಿ ಸಲೀಂ ಎಂಬ ಹೆಸರಿನ ಚೂಡಿದಾರ್ ಅಂಗಡಿಯನ್ನು ನಡೆಸುತ್ತಿದ್ದರು. ಪರವಾನಗಿ ಇಲ್ಲದೆ ಈ ಅಂಗಡಿ ನಡೆಸುತ್ತಿರುವುದು ಕಂಡುಬಂದಿದೆ.
ಚಿನ್ನಾಭರಣ ಕಳ್ಳಸಾಗಣೆಗೆ ಸಂಬಂಧಿಸಿದವರು ಹೆಚ್ಚಾಗಿ ಬರುವ ಈ ಅಂಗಡಿಯಲ್ಲಿ ಹಲವು ಮಂದಿಯನ್ನು ಹೊರ ದೇಶಗಳಿಗೆ ಕಳುಹಿಸುವ ನೇಮಕಾತಿ ಏಜೆನ್ಸಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ನಿಸಾರ್ ಅಹಮದ್ ಇತರ ಆರೋಪಿಗಳೊಂದಿಗೆ ಕೋಝಿಕ್ಕೋಡ್ಗೆ ಹಣ ಸಾಗಿಸಲು ಕಾರಿನಿಂದ ಲಾರಿಗೆ ತುಂಬುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಅಕ್ರಮವಾಗಿ ಹಣ ಸಾಗಿಸಲು ಬಳಸುತ್ತಿದ್ದ ತಳಿಪರಂಬ ಲಾರಿ ಅಹ್ಮದ್ ಕುಂuಟಿಜeಜಿiಟಿeಜ ಹಾಜಿ ಎಂಬುವವರ ಹೆಸರಿನಲ್ಲಿ ಎಸ್ ಆರ್ ಟಿಒದಲ್ಲಿ ನೋಂದಣಿಯಾಗಿರುವುದು ಈ ಹಿಂದೆ ಪತ್ತೆಯಾಗಿತ್ತು.
ಭಯೋತ್ಪಾದಕರಿಗೆ ಕಪ್ಪು ಹಣ ಪೂರೈಕೆಯಲ್ಲಿ ಪ್ರಮುಖ ಕೊಂಡಿ; ಬಟ್ಟೆ ಅಂಗಡಿಗಳ ನೆಪದಲ್ಲಿ ದೇಶವಿರೋಧಿ ಚಟುವಟಿಕೆ; ಚೆನ್ನೈನ ಸಮೀರ್ ಪರ್ದಾ ಅಂಗಡಿ, ತಿರುವನಂತಪುರಂನ ಸಲೀಂ ಚೂಡಿದಾರ್ ಅಂಗಡಿ; ಬಂಧಿತ ಪಾಪ್ಯುಲರ್ ಫ್ರಂಟ್ ಉಗ್ರರಿಗೆ 10 ಕೋಟಿ ತಲುಪಿಸಲು ಯತ್ನಿಸಿದ ನಿಸಾರ್ ನ ಮಾಹಿತಿ ಬಯಲು
0
September 30, 2022