HEALTH TIPS

ಮುಷ್ಕರ ನಡೆಸುವ ಕೆಎಸ್ ಆರ್ ಟಿಸಿ ನೌಕರರಿಗೆ ವೇತನವಿಲ್ಲ; ಆ್ಯಂಟನಿ ರಾಜು


           ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದ ವಿರುದ್ಧ ಸಾರಿಗೆ ಸಚಿವ ಆಂಟನಿ ರಾಜು ಎಚ್ಚರಿಕೆ ನೀಡಿದ್ದಾರೆ. ಸಿಂಗಲ್ ಡ್ಯೂಟಿ ಜಾರಿಗೊಳಿಸುವ ನಿರ್ಧಾರದ ವಿರುದ್ಧ ಕೆಎಸ್‍ಆರ್‍ಟಿಸಿಯಲ್ಲಿ ಐಎನ್‍ಟಿಯುಸಿ ನೇತೃತ್ವದ ಟಿಡಿಎಫ್ ಅನ್ನು ದೂಷಿಸುತ್ತಾ ಸಚಿವರು ಎಚ್ಚರಿಕೆ ನೀಡಿದ್ದಾರೆ.
         ಮುಷ್ಕರ ರಾಜಕೀಯ ಪ್ರೇರಿತವಾಗಿದ್ದು, ಕೆಲವರು 8 ಗಂಟೆಗಳ ಕರ್ತವ್ಯದ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
         ಯೂನಿಯನ್ ಮುಖಂಡರ ಒತ್ತಡಕ್ಕೆ ಮಣಿದು ಯಾರಾದರೂ ಮುಷ್ಕರಕ್ಕೆ ಮುಂದಾದರೆ, ಸಂಘವು ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆಡಳಿತ ಮಂಡಳಿ ಘೋಷಿಸಿದ ಡೈಸನ್‍ಗೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರ ಯೂನಿಯನ್ ಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಆ್ಯಂಟನಿ ರಾಜು ಹೇಳಿದರು. ಪ್ರತಿತಿಂಗಳ ಐದರೊಳಗೆ ವೇತನ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಧರಣಿ ನಿರತರಿಗೆ ಸಂಬಳ ನೀಡುವುದಿಲ್ಲ ಮಾತ್ರವಲ್ಲ ವಾಪಸ್ ಹೋದಾಗ ಕೆಲಸವೂ ಸಿಗುವುದಿಲ್ಲ ಎಂದು ಸಚಿವರು ಬೆದರಿಕೆ ಹಾಕಿದ್ದಾರೆ.
        ಕರ್ತವ್ಯ ಸ್ಥಗಿತಗೊಳಿಸಿದರೆ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಕೆಎಸ್‍ಆರ್‍ಟಿಸಿಯನ್ನು ನಾಶಪಡಿಸಲು ಐಎನ್‍ಟಿಯುಸಿ ಯತ್ನಿಸುತ್ತಿದೆ ಎಂದು ಆ್ಯಂಟನಿ ರಾಜು ಆರೋಪಿಸಿದರು. ಏತನ್ಮಧ್ಯೆ, ಕೆ.ಎಸ್.ಆರ್.ಟಿ.ಸಿ ಅಕ್ಟೋಬರ್ 1 ರಿಂದ ವಾರದಲ್ಲಿ 6 ದಿನ ಸಿಂಗಲ್ ಡ್ಯೂಟಿಯನ್ನು ಜಾರಿಗೆ ತರಲಿದೆ. ಮೊದಲು ಪ್ರಾಯೋಗಿಕವಾಗಿ ಪಾರಶಾಲ ಡಿಪೆÇೀದಲ್ಲಿ ಸುಧಾರಣೆ ಜಾರಿಯಾಗಲಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries