ತಿರುವನಂತಪುರ: ಮಾಕ್ರ್ಸ್ ವಾದವು ಬೆಳೆಯುತ್ತಿರುವ ಶಾಸ್ತ್ರವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹೇಳಿರುವರು.
ಆರ್ಎಸ್ಎಸ್ ಫ್ಯಾಸಿಸ್ಟ್ ನಿಲುವು ಹೊಂದಿದೆ. ಕೇರಳಕ್ಕೆ ರಾಜ್ಯಪಾಲರ ಅಗತ್ಯವಿಲ್ಲ ಎಂಬುದು ಮಾಕ್ರ್ಸ್ವಾದದ ನಿಲುವಾಗಿದೆ ಎಂದು ಪಕ್ಷದ ಕಾರ್ಯದರ್ಶಿ ಹೇಳಿದ್ದಾರೆ.
ಆರೆಸ್ಸೆಸ್ ಶಾಖೆಗೆ ಹೋಗುವ ಮಕ್ಕಳಂತೆ ರಾಜ್ಯಪಾಲರು ನಡೆದುಕೊಳ್ಳಬಾರದು. ಆರಿಫ್ ಮೊಹಮ್ಮದ್ ಖಾನ್ ಅವರು ಹಲವು ವರ್ಷಗಳ ಹಿಂದೆ ಆರ್ಎಸ್ಎಸ್ ಸದಸ್ಯರಾಗಿದ್ದರು. ಭಾರತಕ್ಕಾಗಲೀ ಕೇರಳಕ್ಕಾಗಲೀ ರಾಜ್ಯಪಾಲರ ಅಗತ್ಯವಿಲ್ಲ ಎಂದು ಗೋವಿಂದನ್ ಬಹಿರಂಗವಾಗಿ ಹೇಳಿದ್ದಾರೆ.
ರಾಜ್ಯಪಾಲರು ಬಿಜೆಪಿ-ಆರ್ಎಸ್ಎಸ್ ಕೂಟವಾಗಿ ಬದಲಾಗುತ್ತಿದ್ದಾರೆ ಎಂದು ಸಿಪಿಎಂ ಕಾರ್ಯದರ್ಶಿ ಹೇಳಿದ್ದಾರೆ. ರಾಜ್ಯಪಾಲರ ಅವಶ್ಯಕತೆ ಇಲ್ಲ ಎಂಬುದು ಸಿಪಿಎಂ ನಿಲುವು ಎಂದು ಎಂ.ವಿ.ಗೋವಿಂದನ್ ಪ್ರತಿಕ್ರಿಯಿಸಿದ್ದಾರೆ.
ಮಾಕ್ರ್ಸ್ ವಾದವು ಬೆಳೆಯುತ್ತಿರುವ ಶಾಸ್ತ್ರವಾಗಿದೆ: ಹಾಗಾಗಿ ರಾಜ್ಯಪಾಲರ ಅವಶ್ಯಕತೆ ಇಲ್ಲ: ಎಂ.ವಿ.ಗೋವಿಂದನ್
0
September 30, 2022