ಬದಿಯಡ್ಕ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ನಡೆಯುತ್ತಿರುವ ಭಾರತ ಜೋಡೊ ಯಾತ್ರೆ ಯಶಸ್ವಿಗೆ ಬದಿಯಡ್ಕದಲ್ಲಿ ಶನಿವಾರ ಡಂಗುರ ಮೆರವಣಿಗೆ ಸಿಂಗಾರಿ ಮೇಳದೊಂದಿಗೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಂಞಂಬು ನಾಯರ್ ಉದ್ಘಾಟಿಸಿದರು. ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಎಂ ನಾರಾಯಣ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಖಾದರ್ ಮಾನ್ಯ, ಶ್ಯಾಮ್ ಪ್ರಸಾದ್ ಮಾನ್ಯ, ಗಂಗಾಧರ ಗೋಳಿಯಡ್ಕ, ಚಂದ್ರಹಾಸ ಮಾಸ್ತರ್, ಶಾಫಿ ಗೋಳಿಯಡ್ಕ ಮೊದಲಾದವರು ಮಾತನಾಡಿದರು. ಶಿಜು ಬದಿಯಡ್ಕ, ಮ್ಯಾಥ್ಯು ಯು ಬದಿಯಡ್ಕ, ಶಾಫಿ ಗೋಳಿಯಡಿ, ಜಯಪ್ರಕಾಶ್, ಗೋಪಾಲ ದರ್ಬೆತ್ತಡ್ಕ, ರಾಮ ಪಟ್ಟಾಜೆ ಶ್ರೀನಾಥ್, ಕೃಷ್ಣಕುಮಾರ್, ಐತ್ತಪ್ಪ ಪಟ್ಟಾಜೆ ಕಾರ್ಯಕರ್ತರು ಮೊದಲಾದವರು ನೇತೃತ್ವ ನೀಡಿದರು.
ಭಾರತ ಜೋಡೊ ಯಾತ್ರೆ: ಬದಿಯಡ್ಕದಲ್ಲಿ ಡಂಗುರ ಮೆರವಣಿಗೆ
0
September 18, 2022
Tags