HEALTH TIPS

ಪಾಪ್ಯುಲರ್ ಫ್ರಂಟ್ ಗಲಭೆ: ನಿನ್ನೆ 50 ಜನರ ಬಂಧನ: ಈವರೆಗೆ ಬಂಧಿತರ ಸಂಖ್ಯೆ 2,341 ಕ್ಕೆ ಏರಿಕೆ

 
           ತಿರುವನಂತಪುರ: ರಾಷ್ಟ್ರವ್ಯಾಪಿ ಎನ್‍ಐಎ ದಾಳಿಯನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರು ನಡೆಸಿದ ಹರತಾಳಕ್ಕೆ ಸಂಬಂಧಿಸಿದಂತೆ ಇದುವರೆಗೆ 357 ಪ್ರಕರಣಗಳು ದಾಖಲಾಗಿವೆ.
          ಸೋಮವಾರವμÉ್ಟೀ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ 50 ಜನರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 2,341ಕ್ಕೆ ಏರಿಕೆಯಾಗಿದೆ.
             ಹರತಾಳ ದಿನದಂದು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೊಟ್ಟಾಯಂ ಜಿಲ್ಲೆಯಲ್ಲಿ ಅತಿ ಹೆಚ್ಚು ಬಂಧನಗಳು ದಾಖಲಾಗಿವೆ. ಇಲ್ಲಿ 27 ಪ್ರಕರಣಗಳು ದಾಖಲಾಗಿದ್ದು, 411 ಜನರನ್ನು ಬಂಧಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಮಲಪ್ಪುರಂ, ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.
            ಹರತಾಳದ ವೇಳೆ ಪುನಲೂರಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಧ್ವಂಸ ಪ್ರಕರಣದ ಮೊದಲ ಆರೋಪಿ ಬಸಿತ್ ಅಲ್ವಿ ಬಂಧಿತರಲ್ಲಿ ಸೇರಿದ್ದಾರೆ. ಬಂಧಿತ ಬಾಸಿತ್ ಕ್ಯಾಂಪಸ್ ಫ್ರಂಟ್ ನಾಯಕ.
            ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಮತ್ತು ಬಂಧಿತರ ಸಂಖ್ಯೆ ಈ ಕೆಳಗಿನಂತಿದೆ.
ತಿರುವನಂತಪುರಂ ನಗರ - 25, 68
ತಿರುವನಂತಪುರಂ ಗ್ರಾಮಾಂತರ - 25, 169
ಕೊಲ್ಲಂ ನಗರ - 27, 196
ಕೊಲ್ಲಂ ಗ್ರಾಮಾಂತರ - 15, 165
ಪತ್ತನಂತಿಟ್ಟ - 18, 143
ಆಲಪ್ಪುಳ - 16, 124
ಕೊಟ್ಟಾಯಂ – 27, 411
ಇಡುಕ್ಕಿ - 4, 36
ಎರ್ನಾಕುಳಂ ನಗರ - 8, 91
ಎರ್ನಾಕುಳಂ ಗ್ರಾಮಾಂತರ - 17, 47
ತ್ರಿಶೂರ್ ನಗರ - 13, 21
ತ್ರಿಶೂರ್ ಗ್ರಾಮಾಂತರ - 26, 47
ಪಾಲಕ್ಕಾಡ್ - 7, 89
ಮಲಪ್ಪುರಂ - 34, 238
ಕೋಝಿಕ್ಕೋಡ್ ನಗರ - 18, 93
ಕೋಝಿಕ್ಕೋಡ್ ಗ್ರಾಮಾಂತರ – 29, 96
ವಯನಾಡ್ - 7, 115
ಕಣ್ಣೂರು ನಗರ - 26, 104
ಕಣ್ಣೂರು ಗ್ರಾಮಾಂತರ - 9, 26
ಕಾಸರಗೋಡು - 6, 62



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries