HEALTH TIPS

ಹೆದ್ದಾರಿ ಕುಂದು ಕೊರತೆ ಆಲಿಸಲು ಆಯಪ್‌

 

            ನವದೆಹಲಿ: ರಸ್ತೆಗಳ ಗುಣಮಟ್ಟದ ಕುರಿತು ದೂರುಗಳು ಬರುತ್ತಿರುವ ಕಾರಣ, ಮಳೆಗಾಲ ಮತ್ತು ಆ ನಂತರ ಹೆದ್ದಾರಿಗಳ ಸ್ಥಿತಿಗತಿಗಳ ಬಗ್ಗೆ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಲು 'ಸುಖದ್‌ಯಾತ್ರಾ' ಸ್ಮಾರ್ಟ್‌ಫೋನ್‌ ಆಯಪ್‌ ಅನ್ನು ಮೇಲ್ದರ್ಜೆಗೇರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತೀರ್ಮಾನಿಸಿದೆ.

            ಹೆದ್ದಾರಿಗಳ ಸ್ಥಿತಿ ಮತ್ತು ದುರಸ್ತಿ ಕಾಮಗಾರಿಗಳು ನಡೆದಿವೆಯೇ, ಇಲ್ಲವೊ ಎಂಬ ಮಾಹಿತಿಯನ್ನು ಜನರು ಈ ಆಯಪ್ ಮೂಲಕ ಹಂಚಿಕೊಳ್ಳಬಹುದಾಗಿದೆ ಎಂದೂ ಸಚಿವಾಲಯ ಹೇಳಿದೆ.

            ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಈ ಆಯಪ್‌ನಲ್ಲಿ ಬಳಕೆದಾರರು ಹೆದ್ದಾರಿಗಳ ಕುರಿತ ಇತರ ಮಾಹಿತಿಗಳನ್ನೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries