HEALTH TIPS

ನರಬಲಿ ಪ್ರಕರಣ: ಆರೋಪಿಗಳು ಬಳಸಿದ ಆಯುಧಗಳು ಪತ್ತೆ: ಆರೋಪಿಗಳು ಮತ್ತೆ ಪೋಲೀಸ್ ಕಸ್ಟಡಿಗೆ


           ಎರ್ನಾಕುಳಂ: ನರಬಲಿ ಪ್ರಕರಣದ ಮೂವರು ಆರೋಪಿಗಳನ್ನು ಮತ್ತೆ ಪೋಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.  ನರಬಲಿ ಪ್ರಕರಣದ ಆರೋಪಿಗಳಾದ ಶಫಿ, ಭಗವಲ್ಸಿಂಗ್ ಮತ್ತು ಲೈಲಾ ಅವರನ್ನು ಕಸ್ಟಡಿಗೆ ನೀಡುವಂತೆ ಕಾಲಡಿ ಪೋಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪೋಲೀಸರು 10 ದಿನಗಳ ಕಸ್ಟಡಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಒಂಬತ್ತು ದಿನಗಳ ಕಾಲಾವಕಾಶ ನೀಡಿದೆ.
           ಆರೋಪಿಗಳಿಗೆ ಎರಡು ದಿನಗಳಲ್ಲಿ ತಲಾ 15 ನಿಮಿಷಗಳ ಕಾಲ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ನರಬಲಿ ಸಂಬಂಧ ಇಪ್ಪತ್ತು ಪ್ರಕರಣಗಳಲ್ಲಿ ವಿಸ್ತೃತ ತನಿಖೆ ಅಗತ್ಯವಿದೆ ಎಂದು ಪೋಲೀಸರು ಅರ್ಜಿಯಲ್ಲಿ ತಿಳಿಸಿದ್ದಾರೆ. ಹೇಳಿಕೆಗಳಲ್ಲಿನ ಘಷರ್Àಣೆಯನ್ನು ಪರಿಹರಿಸಲು, ಆರೋಪಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕು, ನರಬಲಿ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಬೇಕು ಮತ್ತು ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು ಎಂದು ಪೋಲೀಸರು ಸೂಚಿಸಿದರು.
         ನರಬಲಿಗೂ ಮುನ್ನ ಪ್ರಕರಣದ ಪ್ರಮುಖ ಆರೋಪಿ ಶಫಿ ಕೇರಳದ ಹಲವು ಜಿಲ್ಲೆಗಳಿಗೆ ತೆರಳಿದ್ದ. ಈ ಬಗ್ಗೆಯೂ ಪೋಲೀಸರು ತನಿಖೆ ನಡೆಸಲಿದ್ದಾರೆ. ಅವರ ಅಪರಾಧಕ್ಕೆ ಹೆಚ್ಚು ಜನರು ಬಲಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕಿದೆ. ಆರೋಪಿಗಳು ಬಳಸಿದ ಆಯುಧಗಳೂ ಪತ್ತೆಯಾಗಬೇಕಿದೆ. ಮಾಧ್ಯಮದ ಮೂಲಕ ಪೋಲೀಸರು ಪ್ರಕರಣವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries