HEALTH TIPS

ಇಳಂತೂರಿನಲ್ಲಿ ತಪಾಸಣೆ ಪ್ರಗತಿಯಲ್ಲಿ:ಶ್ವಾನಗಳು ಗುರುತಿಸಿದ ಸ್ಥಳಗಳಲ್ಲಿ ಅಸ್ವಾಭಾವಿಕ ಗಿಡಗಳು


                 ಪತ್ತನಂತಿಟ್ಟ: ಇಳಂತೂರಿನಲ್ಲಿ ಜೋಡಿ ಹತ್ಯೆ ನಡೆದಿದ್ದ ಮನೆಯಲ್ಲಿ ತನಿಖಾ ತಂಡ ಮರು ಪರಿಶೀಲನೆ ನಡೆಸಿದೆ. ಆರೋಪಿ ಭಗವಾಲ್ ಸಿಂಗ್ ಮತ್ತು ಲೈಲಾ ಅವರ ಮನೆಯಲ್ಲಿ ತನಿಖೆ ನಡೆಯುತ್ತಿದೆ.
                     ಹೆಚ್ಚಿನ ಕೊಲೆಗಳು ನಡೆದಿವೆ ಎಂಬ ಅನುಮಾನದ ಆಧಾರದ ಮೇಲೆ, ತರಬೇತಿ ಪಡೆದ ನಾಯಿಗಳಾದ ಮಾಯಾ ಮತ್ತು ಮರ್ಫಿಯನ್ನು ತನಿಖೆಗೆ ತರಲಾಗಿದೆ. ಇವುಗಳು ಮೃತ ದೇಹಗಳನ್ನು ನೆಲದಾಳಗಳಿಂದ ವಾಸನೆಯಿಂದ ಪತ್ತೆಮಾಡಲು ತರಬೇತಿ ಪಡೆದ ಶ್ವಾನಗಳಾಗಿವೆ.
                    ಪೋಲೀಸರು ಅಸಾಮಾನ್ಯ ರೀತಿಯಲ್ಲಿ ಶ್ವಾನಗಳು ವಾಸನೆಹಿಡಿದ ಸ್ಥಳಗಳನ್ನು ಅಗೆದು ಪರಿಶೀಲಿಸುತ್ತಾರೆ. ಪ್ರಸ್ತುತ ಮೂರು ಸ್ಥಳಗಳನ್ನು ಈ ರೀತಿ ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಸ್ವಾಭಾವಿಕ ರೀತಿಯಲ್ಲಿ ಗಿಡಗಳನ್ನು ನೆಡಲಾಗಿರುವುದೂ ಕಂಡುಬಂದಿದೆ.
                       ಪೋಲೀಸ್ ಶ್ವಾನವೊಂದು ಮೊದಲು ಅರಿಶಿನ ಗಿಡಗಳನ್ನು ನೆಟ್ಟ ಜಾಗಕ್ಕೆ ವಾಸನೆ ತೋರಿಸಿತು. ಈ ಜಾಗದಲ್ಲಿ ನಾಯಿ ಬೊಗಳಿ ಮೂಗು ತೂರಿಸಿದಾಗ ಪೋಲೀಸರು ಗುಂಡಿ ತೋಡಿ ತಪಾಸಣೆಗೆ ಗುರುತು ಮಾಡಿದ್ದಾರೆ. ಅದರ ನಂತರ, ನಾಯಿ ಮತ್ತೊಂದು ಮರವಿರುವಲ್ಲಿ ಗುರುತುಮಾಡಿದೆ. ಮಾಹಿತಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಆರೋಪಿಯ ಮನೆಯಿಂದ ಮೂಳೆಗಳು ಪತ್ತೆಯಾಗಿವೆ. ಅಸ್ಥಿ ಮನುಷ್ಯನದೇ ಎಂಬುದನ್ನು ದೃಢಪಡಿಸಲು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.

                   ಲೈಲಾ ಮತ್ತು ಭಗವಾಲ್ ಸಿಂಗ್ ಅವರನ್ನು ಪರ್ಯಾಯವಾಗಿ ವಿಚಾರಣೆ ನಡೆಸಿದಾಗ ಹಲವು ಅಸಂಗತತೆಗಳಿವೆ ಎಂದು ಪೋಲೀಸರು ತಿಳಿಸಿದ್ದಾರೆ. ಬೇರೆಯವರಿಗೆ ನರಬಲಿ ಮಾಡಿದ್ದೇವೆ ಎಂದು ಹೇಳದಿದ್ದರೂ, ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬ ಶಂಕೆ ಮೇರೆಗೆ ವಿಸ್ತೃತ ತನಿಖೆ ನಡೆಸಲು ಪೋಲೀಸರು ನಿರ್ಧರಿಸಿದ್ದಾರೆ. ಪ್ರಮುಖ ಆರೋಪಿ ಶಫಿ ತನಿಖಾ ಅಧಿಕಾರಿಗಳಿಗೆ ಸಹಕರಿಸುತ್ತಿಲ್ಲ. ಇದು ಪೋಲೀಸರಿಗೆ ದೊಡ್ಡ ಸವಾಲಾಗಿದೆ. ತನಿಖಾ ತಂಡ ಆರೋಪಿಗಳ ಮನೆಗೆ ತಲುಪಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries