HEALTH TIPS

ಕೊಂಡೆವೂರು ಮಠದಲ್ಲಿ “ಅಗ್ನಿವೀರ್” ತರಬೇತಿ ಶಿಬಿರದ ಸಮಾರೋಪ


        ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸೇನೆ ಸೇರಬಯಸುವ ಅಭ್ಯರ್ಥಿಗಳಿದ್ದ ಉಚಿತ ವಸತಿ ,ಶಾರೀರಿಕ ತರಬೇತಿ ಶಿಬಿರ ಭಾನುವಾರ ಸಂಪನ್ನಗೊಂಡಿತು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಭಾರತಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಮಾರೋಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಮಪೂಜ್ಯರು ಆಶೀರ್ವಚನ ನೀಡಿ ಪೂರ್ಣ ದೇಶ ನಮ್ಮದು ಎನ್ನುವ ಭಾವನೆಯಿಂದ ಸಂಸ್ಕøತಿ ಉಳಿಸಿ ಬೆಳೆಯಬೇಕು. ದೇಶ ಸೇವೆ ದೇವ ಸೇವೆ ಎಂದು ಕರೆ ನೀಡಿದರು.


          ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಬ್ರಿಗೇಡಿಯರ್ ಐ.ಎನ್ ರೈ, ಕರ್ನಲ್ ಎ.ಕೆ ಜಯಚಂದ್ರನ್ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ, ಸಹಾಯಕ ಪ್ರಾಧ್ಯಾಪಿಕೆ ರವರುಗಳು ಜೀವನದ ಗುರಿ ಸಾಧಿಸುವ ಬಗ್ಗೆ ಸದಾಶಯದ ನುಡಿಗಳನ್ನಾಡಿದರು. ಕಾಞಂಗಾಡಿನ ದ್ರೋಣಾಚಾರ್ಯ ಸೈನಿಕ ತರಬೇತಿ ಅಕಾಡೆಮಿಯ ಅಧ್ಯಕ್ಷ ಲೆಫ್ಟಿನೆಂಟ್ ವಿಜಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು. 46 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು. ಕ್ಯಾಂಪ್ಕೊ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ಬಾಡೂರು ಸ್ವಾಗತಿಸಿ,  ಸರ್ವೇಶ್ ಕೊರಂಬಳ ವಂದಿಸಿದರು. ವಂದೇಮಾತರಂನೊಡನೆ ಆರಂಭಗೊಂಡ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries