HEALTH TIPS

ವಿಝಿಂಜಂ ಸಂಘರ್ಷ: ರಾಜ್ಯಾದ್ಯಂತ ಎಚ್ಚರಿಕೆ: ರಜೆಯಲ್ಲಿರುವ ಪೋಲೀಸರು ಕೂಡಲೇ ಮರಳಲು ಸೂಚನೆ


              ತಿರುವನಂತಪುರಂ: ವಿಝಿಂಜಂ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಲರ್ಟ್ ಘೋಷಿಸಲಾಗಿದೆ.
         ಗಲಭೆ ರೀತಿಯ ಪರಿಸ್ಥಿತಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ಪೋಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಎರಡು ವಾರಗಳವರೆಗೆ ಎಚ್ಚರಿಕೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಉಸ್ತುವಾರಿ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಸೂಚಿಸಿದ್ದಾರೆ.
          ಕರಾವಳಿ ಭಾಗದ ಠಾಣೆಗಳು ವಿಶೇಷ ಕಟ್ಟೆಚ್ಚರ ವಹಿಸಬೇಕು ಹಾಗೂ ಎಲ್ಲ ಪೆÇಲೀಸರು ಕರ್ತವ್ಯಕ್ಕೆ ನಿರ್ವಹಿಸಬೇಕು ಎಂದು ಎಡಿಜಿಪಿ ನಿರ್ದೇಶನ ನೀಡಿದ್ದಾರೆ. ರಜೆಯಲ್ಲಿರುವ ಪೆÇಲೀಸರು ಹಿಂತಿರುಗಬೇಕು. ತುರ್ತು ಸಂದರ್ಭದಲ್ಲಿ ರಜೆ ಬೇಕಿರುವವರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆಯಬೇಕು.ಈ ಬಗ್ಗೆ ವಿಶೇಷ ವಿಭಾಗವು ಮಾಹಿತಿ ಸಂಗ್ರಹಿಸಬೇಕು. ರೇಂಜ್ ಡಿ ಐಜಿಗಳು ನೇರವಾಗಿ ಪರಿಸ್ಥಿತಿಯನ್ನು ನಿರ್ಣಯಿಸಬೇಕು.
          ಇದೇ ವೇಳೆ ಸಂಘರ್ಷದ ಸಾಧ್ಯತೆಯನ್ನು ಪರಿಗಣಿಸಿ ಕಾನೂನು ಸುವ್ಯವಸ್ಥೆಗೆ ವಿಶೇಷ ತಂಡವನ್ನು ನೇಮಿಸಲಾಗಿದೆ. ತಿರುವನಂತಪುರ ವ್ಯಾಪ್ತಿಯ ಡಿಐಜಿ ನಿಶಾಂತಿ ಅವರು ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಉಸ್ತುವಾರಿ ವಹಿಸಿರುವ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಅವರು ನಿಶಾಂತಿನಿ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿದರು. ತಂಡದಲ್ಲಿ ಎಸ್ಪಿ, ಡಿವೈಎಸ್ಪಿ, ಸಿಐ ಸೇರಿದಂತೆ ಅಧಿಕಾರಿಗಳು ಇದ್ದಾರೆ. ಇದಲ್ಲದೇ ಡಿಸಿಪಿ ಅಜಿತ್ ಕುಮಾರ್, ಕೆ.ಇ. ಬೈಜು ಮತ್ತು ಮಧುಸೂದನ್ ಕೂಡ ತಂಡದಲ್ಲಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries