HEALTH TIPS

ನನ್ನ ಎಮ್ಮೆ ಸಾವಿಗೆ ಗ್ರಾಮದ ಮೇಲೆ ಹಾರಿ ಹೋದ ಹೆಲಿಕಾಪ್ಟರ್​ ಕಾರಣ! ಪೈಲಟ್​ ವಿರುದ್ಧ ರೈತನ ದೂರು

 

               ಜೈಪುರ: ಹೆಲಿಕಾಪ್ಟರ್​ ಶಬ್ದಕ್ಕೆ ನನ್ನ ಎಮ್ಮೆ ಸತ್ತಿದೆ ಎಂದು ರೈತನೊಬ್ಬ ದೂರು ನೀಡಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

                 ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಬಹ್ರೋಡ್​ ವಿಧಾನಸಭಾ ಕ್ಷೇತ್ರದ ಶಾಸಕ ಬಲ್ಜೀತ್​ ಯಾದವ್​ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಕಾರ್ಯಕರ್ತರು ಕಾರ್ಯಕ್ರಮ ಆಯೋಜನೆ ಮಾಡಿದ್ದರು.

                  ಹೆಲಿಕಾಪ್ಟರ್​ ಮೂಲಕ ಹೂಮಳೆ ಸುರಿಸಿ ಗ್ರ್ಯಾಂಡ್​ ವೆಲ್​ಕಮ್​ ಮಾಡಲು ಬಯಸಿದ್ದರು. ತಮ್ಮ ಯೋಜನೆಯಂತೆ ಭಾನುವಾರ ಶಾಸಕರು ಬಂದಾಗ ಬಹ್ರೋಡ್​ ವೃತ್ತದಲ್ಲಿ ಹೆಲಿಕಾಪ್ಟರ್​​ ಮೂಲಕ ಹೂಮಳೆ ಸುರಿಸಿದ್ದರು. ಇದಾದ ಬಳಿಕ ಹೆಲಿಕಾಪ್ಟರ್​ ಕೊಹ್ರಾನಾ ಗ್ರಾಮದ ಮೂಲಕ ಹಾದು ಹೋಯಿತು.

                  ಹೆಲಿಕಾಪ್ಟರ್​ ಅತ್ಯಂತ ಕೆಳಗೆ ಹಾರಾಟ ನಡೆಸಿದ ಪರಿಣಾಮ ಭಾರಿ ಶಬ್ದ ಉಂಟಾಗಿದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಕಿರಿಕಿರಿಯಾಗಿದೆ. ಆದರೆ, ವಿಚಿತ್ರ ಏನೆಂದರೆ, ಕೊಹ್ರಾನಾ ಗ್ರಾಮದ ಬಲ್ವೀರ್​ ಎಂಬ ರೈತ ವಿಚಿತ್ರ ಆರೋಪವೊಂದನ್ನು ಮಾಡಿದ್ದಾರೆ. ಒಂದೂವರೆ ಲಕ್ಷ ರೂ. ಮೌಲ್ಯದ ತನ್ನ ಎಮ್ಮೆ ಹೆಲಿಕಾಪ್ಟರ್​ ಸದ್ದಿನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದಾರೆ.

               ಎಮ್ಮೆ ಮೃತಪಟ್ಟ ಸಂಬಂಧ ಹೆಲಿಕಾಪ್ಟರ್​ ಪೈಲಟ್​ ವಿರುದ್ಧ ರೈತ ದೂರು ದಾಖಲಿಸಿದ್ದಾನೆ. ಇದರ ಬೆನ್ನಲ್ಲೇ ಎಮ್ಮೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷಾ ವರದಿ ಬಂದು ಸಾವಿಗೆ ಕಾರಣ ಗೊತ್ತಾದ ಬಳಿಕ ಪೊಲೀಸರು ಪ್ರಕರನ ದಾಖಲಿಸಲಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries