ಪಾಲಕ್ಕಾಡ್: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ಗೆ ಉದ್ಯೋಗ ನೀಡಿದ ಸ್ವಯಂಸೇವಾ ಸಂಸ್ಥೆ ಎಚ್ಆರ್ಡಿಎಸ್ ಕೇರಳ ತೊರೆಯಲು ಮುಂದಾಗಿದೆ.
ಸರ್ಕಾರ ನಿರಂತರವಾಗಿ ಬೇಟೆಯಾಡುತ್ತಿದೆ ಎಂದು ಎಚ್ಆರ್ಡಿಎಸ್ ಕಾರ್ಯದರ್ಶಿ ಅಜಿ ಕೃಷ್ಣನ್ ತಿಳಿಸಿದ್ದಾರೆ. ಕ್ರೈಂ ಬ್ರಾಂಚ್ ಎಚ್ಆರ್ಡಿಎಸ್ ನ ಎಲ್ಲಾ ಕಚೇರಿಗಳ ಮೇಲೆ ದಾಳಿ ಮಾಡುತ್ತಿದೆ. ಸ್ವಪ್ನಾ ಸುರೇಶ್ ಅವರಿಗೆ ಕೆಲಸ ನೀಡಿದ ದಿನದಿಂದಲೇ ಸರ್ಕಾರದ ಸೇಡಿನ ಕ್ರಮ ಶುರುವಾಗಿದೆ. ಕೇರಳ ಸರ್ಕಾರ ಎಚ್ಆರ್ಡಿಎಸ್ಗೆ ಏಕೆ ಹೆದರುತ್ತಿದೆ ಎಂದು ತಿಳಿದಿಲ್ಲ. ವಾರಗಳ ಹಿಂದೆ ವಿಜಿಲೆನ್ಸ್ ಮತ್ತೆ ದಾಳಿ ನಡೆಸಿತ್ತು ಎಂದು ಅಜಿ ಕೃಷ್ಣನ್ ಹೇಳಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ಗೆ ಕೆಲಸ ನೀಡಿದ ನಂತರ ಸಿಪಿಐ(ಎಂ) ಮುಖಂಡರು ಮತ್ತು ಸರ್ಕಾರ ಎಚ್ಆರ್ಡಿಎಸ್ಗೆ ರಾಜಕೀಯ ಸಂಪರ್ಕವಿದೆ ಎಂದು ಆರೋಪಿಸಿತ್ತು. ಸರ್ಕಾರದ ದಿಕ್ಕುತಪ್ಪಿ ನಡೆಗಳನ್ನು ಬಯಲಿಗೆಳೆಯುವ ಸ್ವಪ್ನಾ ಸುರೇಶ್ ಅವರಿಗೆ ನೌಕರಿ ಹಾಗೂ ರಕ್ಷಣೆ ನೀಡಿರುವುದು ಸರ್ಕಾರವನ್ನು ಕೆರಳಿಸಿದೆ. ಹೈ ರೇಂಜ್ ರೂರಲ್ ಡೆವಲಪ್ಮೆಂಟ್ ಸೊಸೈಟಿ (ಎಚ್ಆರ್ಡಿಎಸ್) ಕೇರಳ, ತಮಿಳುನಾಡು, ಗುಜರಾತ್, ತ್ರಿಪುರಾ, ಅಸ್ಸಾಂ ಮತ್ತು ಜಾಖರ್ಂಡ್ ಸೇರಿದಂತೆ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಯಾಗಿದೆ.
ಸಂಸ್ಥೆಯು 1995 ರಲ್ಲಿ ರೂಪುಗೊಂಡಿತು. ಈ ಸಂಘಟನೆ ಆದಿವಾಸಿಗಳ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು. ಆದಿವಾಸಿಗಳ ಒತ್ತುವರಿ ಮತ್ತು ಭೂಮಿ ಕಬಳಿಕೆ ಆರೋಪದ ಮೇಲೆ ಎಚ್ಆರ್ಡಿಎಸ್ ಕಾರ್ಯದರ್ಶಿ ಅಜಿ ಕೃಷ್ಣನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಈ ಎಲ್ಲಾ ಪ್ರಕರಣಗಳು ರಾಜಕೀಯ ಪ್ರೇರಿತವಾಗಿದ್ದು, ಸಪ್ನಾಗೆ ಕೆಲಸ ಕೊಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಎಚ್ಆರ್ಡಿಎಸ್ ಹೇಳಿದೆ.
ಸರ್ಕಾರ ನಿರಂತರ ಕಿರುಕುಳ: ಸ್ವಪ್ನಾಸುರೇಶ್ ಗೆ ಕೆಲಸ ಕೊಟ್ಟಾಗಿಂದ ಶುರುವಾದ ಹಗೆತನ: ಕೇರಳ ತೊರೆಯುವ ಸಿದ್ದತೆಯಲ್ಲಿ ಎಚ್.ಆರ್.ಡಿ.ಎಸ್.
0
November 18, 2022
Tags