HEALTH TIPS

ಆಹ್ವಾನಿಸದೆ ವಿವಾಹಕ್ಕೆ ಆಗಮಿಸಿದ ವ್ಯಕ್ತಿಗೆ ಥಳಿತ: ಸಂಘರ್ಷ ಕೇಂದ್ರವಾದ ವಿವಾಹ ವೇದಿಕೆ


           ತಿರುವನಂತಪುರ: ವಿವಾಹ ಆರತಕ್ಷತೆ ವೇಳೆ ಘರ್ಷಣೆ ನಡೆದ ಘಟನೆ ನಡೆದಿದೆ. ವಧುವಿನ ತಂದೆಗೂ ಥಳಿಸಲಾಗಿದೆ.
           ಗಾಯಾಳುಗಳನ್ನು ನೆಯ್ಯಟ್ಟಿಂಗರ ತಾಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.ಬಲರಾಮಪುರಂನ ಸೇಂಟ್ ಸೆಬಾಸ್ಟಿಯನ್ ಚರ್ಚ್ ನ ಸಭಾಂಗಣದಲ್ಲಿ ಘರ್ಷಣೆ ನಡೆದಿದೆ.
           ವಧುವಿನ ತಂದೆ ಹಾಗೂ ಸಮೀಪದ ನಿವಾಸಿ ಅಭಿಜಿತ್ ಎಂಬ ಯುವಕನೊಂದಿಗೆ ವಾಗ್ವಾದ ನಡೆದಿದೆ. ನಂತರ ಈ ವಿವಾದ ಸಂಘರ್ಷಕ್ಕೆ ತಿರುಗಿತು.  ಅಭಿಜಿತ್ ಅವರನ್ನು ವಧುವಿನ ಮನೆಯವರು ಮದುವೆಗೆ ಆಹ್ವಾನಿಸಿರಲಿಲ್ಲ. ಆದರೂ ವಿವಾಹ ಮಂಟಪಕ್ಕೆ ಅವರು ಆಗಮಿಸಿದ್ದರು. ನಂತರ ವಧುವಿನ ತಂದೆಗೆ ಉಡುಗೊರೆ ನೀಡಲಾಯಿತು.
           ಆದರೆ ವಧುವಿನ ತಂದೆ ಅದನ್ನು ಪಡೆದುಕೊಳ್ಳಲು ಸಿದ್ಧರಿರಲಿಲ್ಲ. ನಂತರ ಗುಂಪು ಸೇರಿಕೊಂಡು ವಧುವಿನ ಸಂಬಂಧಿಕರಿಗೆ ಥಳಿಸಿದ್ದಾರೆ. ವಧುವಿನ ಮನೆಯವರು ಅಭಿಜಿತ್ ಅವರ ಹಿಂದಿನ ದ್ವೇಷವೇ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries