ಮಂಜೇಶ್ವರ: ಕೇರಳ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಜನವರಿ 6 ಮತ್ತು 7 ರಂದು ಬಹುಭಾμÁ ಸಮ್ಮೇಳನ ನಡೆಯಲಿದೆ. ಕೇರಳ ಸಂಗೀತ ನಾಟಕ ಅಕಾಡೆಮಿ, ಕೇರಳ ಜಾನಪದ ಅಕಾಡೆಮಿ ಮತ್ತು ಕೇರಳ ತುಳು ಅಕಾಡೆಮಿಯ ಸಹಯೋಗದಲ್ಲಿ ಮಂಜೇಶ್ವರದಲ್ಲಿರುವ ರಾಷ್ಟ್ರ್ರಕವಿ ಗೋವಿಂದ ಪೈ ಸ್ಮಾರಕದಲ್ಲಿ ಸಮ್ಮೇಳನ ನಡೆಯಲಿದೆ. ಖ್ಯಾತ ಕವಿ ಸಚ್ಚಿದಾನಂದನ್ ಬಹುಭಾμÁ ಸಮ್ಮೇಳನವನ್ನು ಉದ್ಘಾಟಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಡಾ.ಕೆ.ಚಿನ್ನಪ್ಪ ಗೌಡ ಹಾಗೂ ಡಾ.ಇ.ವಿ.ರಾಮಕೃಷ್ಣನ್ ಉಪನ್ಯಾಸ ನೀಡುವರು. ಮಧ್ಯಾಹ್ನ 2 ಗಂಟೆಗೆ ವಿಚಾರ ಸಂಕಿರಣ, ಸಂಜೆ 4.30ಕ್ಕೆ ಕವಿಗೋಷ್ಠಿ ನಡೆಯಲಿದೆ.
ಸಂಜೆ 4.30 ರಿಂದ ನಡೆಯುವ ನಾಟಕೋತ್ಸವವನ್ನು ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿ ಕರಿವೆಳ್ಳೂರು ಮುರಳಿ ಉದ್ಘಾಟಿಸುವರು. ಸಂಜೆ 7.15ಕ್ಕೆ ಶಾಂಭವಿ ವಿಜಯ ಯಕ್ಷಗಾನ (ತುಳು) ಹಾಗೂ ಚೋಮನದುಡಿ ನಾಟಕ (ಕನ್ನಡ) ಪ್ರದರ್ಶನಗೊಳ್ಳಲಿದೆ.
ಖ್ಯಾತ ಚಿತ್ರಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಚಿತ್ರ ಪ್ರದರ್ಶನವನ್ನು, ಕೇರಳ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಅಶೋಕನ್ ಚರುವಿಲ್ ಭಾಷಾ ಪ್ರದರ್ಶನವನ್ನು ಹಾಗೂ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ಕುಂಞÂ ರಾಮನ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು. ಜನವರಿ 7 ರಂದು ಶನಿವಾರ ಬೆಳಿಗ್ಗೆ 9.30 ಕ್ಕೆ ಹಾಡುಗಾರಿಕೆ ಮತ್ತು ಭಾಷಣ ನಡೆಯಲಿದೆ. 11ರಂದು "ಕಾಸರಗೋಡಿನ ಬದುಕು ಸಾಹಿತ್ಯದಲ್ಲಿ" ವಿಚಾರ ಸಂಕಿರಣವನ್ನು ಖ್ಯಾತ ಸಾಹಿತಿ ಸಿ.ವಿ.ಬಾಲಕೃಷ್ಣನ್ ಉದ್ಘಾಟಿಸುವರು.
ಮಧ್ಯಾಹ್ನ 2.30ರಿಂದ ಕಾಸರಗೋಡಿನ ವಿವಿಧ ಭಾಷೆಗಳ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ಸಂಜೆ 4 ಕ್ಕೆ ನಡೆಯುವ ಸಮಾರೋಪದ ಸಮಾರಂಭದಲ್ಲಿ ಕೆ.ಪಿ.ರಾಮಣ್ಣಿ ಮಾತನಾಡುವರು. ಸಂಜೆ 5 ಕ್ಕೆ ಚಂದೇರ ಚೆಂಬಿಲೋಟ್ ಭಗವತಿ ಕ್ಷೇತ್ರ ಪೂರಕ್ಕಳಿ ಸಂಘದ ಸದಸ್ಯರಿಂದ ಪೂರಕ್ಕಳಿ ಹಾಗೂ ಸಂಜೆ 7 ರಿಂದ ಸಂಕೀರ್ತನಾ ಕಲ್ಲಿಕೋಟೆ ಅವರ ನಾಟಕ "ವೇಟ್ಟ" ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
ಕೇರಳ ಸಾಹಿತ್ಯ ಅಕಾಡೆಮಿಯ ಬಹುಭಾಷಾ ಸಮ್ಮೇಳನ ಜನವರಿ 6 ಮತ್ತು 7 ರಂದು
0
December 30, 2022
Tags