ಆಲಪ್ಪುಳ: ಕಣಿಚುಕುಲಂಗರ ಎಸ್ಎನ್ಡಿಪಿ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ಮಹೇಶನ ಸಾವಿನ ಪ್ರಕರಣದಲ್ಲಿ ವೆಳ್ಳಾಪಳ್ಳಿ ನಟೇಶನ್ ಮೊದಲ ಆರೋಪಿ ಎಂದು ಪ್ರಕರಣ ದಾಖಲಾಗಿದೆ.
ಮರಾರಿಕುಳಂ ಪೋಲೀಸರು ದಾಖಲಿಸಿರುವ ಪ್ರಕರಣದಲ್ಲಿ ವೆಳ್ಳಾಪಳ್ಳಿಯನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ವ್ಯವಸ್ಥಾಪಕ ಕೆ. ಎಲ್ ಅಶೋಕನ್ ಮತ್ತು ತುಷಾರ್ ವೆಲ್ಲಾಪಳ್ಳಿ ಅವರನ್ನು ಪ್ರಕರಣದಲ್ಲಿ ಎರಡನೇ ಮತ್ತು ಮೂರನೇ ಆರೋಪಿಗಳನ್ನಾಗಿ ಮಾಡಲಾಗಿದೆ.
ಕೆ.ಕೆ.ಮಹೇಶನ ಕುಟುಂಬ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಆಲಪ್ಪುಳ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪಿತೂರಿ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಸೆಕ್ಷನ್ಗಳನ್ನು ದಾಖಲಿಸಲಾಗಿದೆ. ಆರೋಪಿಗಳು ಕೆ.ಕೆ.ಮಹೇಶನನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸಿದ್ದಾರೆ ಎಂದೂ ಎಫ್ಐಆರ್ನಲ್ಲಿ ಹೇಳಲಾಗಿದೆ.
ಮೈಕ್ರೋ ಫೈನಾನ್ಸ್ ವಂಚನೆ ಪ್ರಕರಣದಲ್ಲಿ ಕೆ.ಕೆ. ಮಹೇಶನನ್ನು ಆರೋಪಿಯನ್ನಾಗಿ ಮಾಡುವ ಹಿಂದೆ ವೆಲ್ಲಾಪಳ್ಳಿ ನಟೇಶನ್, ತುಷಾರ್ ವೆಲ್ಲಾಪಳ್ಳಿ, ಕೆ.ಎಲ್. ಅಶೋಕನ್ ಮತ್ತಿತರರು ಸಂಚು ರೂಪಿಸಿದ್ದರು ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. ಕೆ.ಕೆ.ಮಹೇಶನ ಆತ್ಮಹತ್ಯೆ ಕೊಲೆಯಂತೆಯೇ ಇದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಆದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸುಭಾμï ವಾಸು ಸೇರಿದಂತೆ ಎಸ್ಎನ್ಡಿಪಿಯ ಶತ್ರುಗಳು ಮಹೇಶನನ್ನು ಮಾನಸಿಕವಾಗಿ ಹಿಂಸಿಸಿ ಸಾಯಿಸಿದ್ದಾರೆ ಎಂದು ವೆಲ್ಲಾಪಳ್ಳಿ ನಟೇಶನ್ ಹೇಳುತ್ತಾರೆ. ಜೂನ್ 23, 2020 ರಂದು ಕಣಿಚುಕುಲಂಗರದ ಎಸ್ಎನ್ಡಿಪಿ ಕಚೇರಿಯೊಳಗೆ ಕೆ.ಕೆ. ಮಹೇಶ ಶವವಾಗಿ ಪತ್ತೆಯಾಗಿದ್ದ. ಹೆಚ್ಚಿನ ತನಿಖೆಯಿಂದ ಆತ್ಮಹತ್ಯೆ ಎಂದು ತಿಳಿದುಬಂದಿದೆ.
ಕಣಿಚುಕುಳಂಗರ ಪ್ರಕರಣ: ಕೆ.ಕೆ. ಮಹೇಶನ ಸಾವಿನಲ್ಲಿ ವೆಲ್ಲಾಪÀಳ್ಳಿ ನಟೇಶನ್ ಮೊದಲ ಆರೋಪಿ: ಪ್ರಕರಣ ದಾಖಲು
0
December 01, 2022