HEALTH TIPS

ಖಾಕಿಯೊಳಗೆ ಭೀತಿವಾದ? ಗೂಢಚಾರ ಖಾಕಿಯಿಂದ ಎನ್ ಐಎ ದಾಳಿ ಸೋರಿಕೆ; ಪಾಪ್ಯುಲರ್ ಫ್ರಂಟ್ ನಾಯಕರು ನಾಪತ್ತೆ


             ತಿರುವನಂತಪುರಂ; ಪಾಪ್ಯುಲರ್ ಫ್ರಂಟ್ ನಿಷೇಧಕ್ಕೆ ಸಂಬಂಧಿಸಿದ ಎನ್‍ಐಎ ದಾಳಿ ಸೋರಿಕೆಯಾಗಿದೆ ಪತ್ತನಂತಿಟ್ಟದಲ್ಲಿ ಎನ್‍ಐಎ ನಡೆಸಿದ ದಾಳಿಯ ಮಾಹಿತಿ ಹೊರಬಿದ್ದಿದೆ.
          ಕೇರಳ ಪೆÇಲೀಸರಿಂದ ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂದು ಸೂಚನೆಗಳಿವೆ. 12 ಗಂಟೆಗಳ ಮೊದಲು ದಾಳಿ ನಡೆಯಲಿದೆ ಎಂದು ಎನ್‍ಐಎ ಪೆÇಲೀಸರಿಗೆ ಮಾಹಿತಿ ನೀಡಿದೆ. ದಾಳಿಗೆ ಗಂಟೆಗಳ ಮೊದಲು, ಪಿಎಫ್‍ಐ ಮಾಜಿ ಪ್ರಾದೇಶಿಕ ಕಾರ್ಯದರ್ಶಿ ಮೊಹಮ್ಮದ್ ರಶೀದ್ ತನ್ನ ಮನೆಯಿಂದ ನಾಪತ್ತೆಯಾಗಿದ್ದ.  ಇದು ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂಬ ತೀರ್ಮಾನಕ್ಕೆ ಕಾರಣವಾಗುತ್ತದೆ.
   ಎನ್.ಐ.ಎ ನಿಷೇಧದ ನಂತರವೂ, ಅದರ ಕೆಲವು ನಾಯಕರು ಮತ್ತು ಕಾರ್ಯಕರ್ತರು ಗುಪ್ತಚರ ಸಂಸ್ಥೆಗಳು ಮತ್ತು ಎನ್.ಐ.ಎ ಯ ಕಣ್ಗಾವಲಿನಲ್ಲಿದ್ದರು. ನಿಷೇಧದ ನಂತರವೂ ಸಂಘಟನೆಯನ್ನು ಸಕ್ರಿಯವಾಗಿಡಲು ಯತ್ನಿಸುತ್ತಿರುವ ಶಂಕಿತರ ಪತ್ತೆಗಾಗಿ ರಾಜ್ಯಾದ್ಯಂತ 56 ಕೇಂದ್ರಗಳಲ್ಲಿ ದಾಳಿ ನಡೆಸಲಾಗಿದೆ. ಹಲವು ದಾಖಲೆ ಪತ್ರಗಳು, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಪಾಪ್ಯುಲರ್ ಫ್ರಂಟ್ ನಿμÉೀಧಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಈ ದಾಳಿ ನಡೆಸಲಾಗಿದೆ ಎಂದು ಎನ್ ಐಎ ತಿಳಿಸಿದೆ.
          ಏತನ್ಮಧ್ಯೆ, ಇಂದು ನಡೆಸಿದ ದಾಳಿಯಲ್ಲಿ ಮಾಜಿ ರಾಜ್ಯ ಕಾರ್ಯದರ್ಶಿ ನಿಸಾರ್ ಅವರ ಮನೆಯಿಂದ ಬ್ಯಾಗ್ ಮತ್ತು ಫೆÇೀನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲ್ಲಂನಲ್ಲಿರುವ ಮಾಜಿ ಜಿಲ್ಲಾಧ್ಯಕ್ಷರ ಮನೆಯಿಂದಲೂ ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಲಪ್ಪುರಂನಲ್ಲಿರುವ ಮಾಜಿ ರಾಷ್ಟ್ರೀಯ ಅಧ್ಯಕ್ಷ ಒಎಂಎ ಸಲಾಂ ಅವರ ಸಹೋದರನ ಮನೆಯಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries