HEALTH TIPS

ಮಲೆಯಾಳ ಶಿಕ್ಷಕರ ನೇಮಕಾತಿ; ಸರ್ಕಾರಿ ಪ್ರೌಢ ಶಾಲೆಯ ಕನ್ನಡ ತರಗತಿಗೆ ಸಂಚಕಾರ; ಮಕ್ಕಳ ಹಕ್ಕುಗಳ ಆಯೋಗದ ಆದೇಶದ ಹೊರತಾಗಿಯೂ ವರ್ಗಾವಣೆಗೊಳ್ಳದ ಶಿಕ್ಷಕ


          ಕುಂಬಳೆ: ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರ ಹುದ್ಧೆಗಳಿಗೆ ಮಲೆಯಾಳಿ ಶಿಕ್ಷಕರನ್ನು ನೇಮಿಸುತ್ತಿರುವುದು ಕನ್ನಡ ತರಗತಿಗಳ ಪಾಲಿಗೆ ಸಂಚಕಾರ ತರುತ್ತಿದೆ.
             ಆದೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಪೈವಳಿಕೆ ಹೈಯರ್ ಸೆಕೆಂಡರೀ ಶಾಲೆ, ಅಂಗಡಿಮೊಗರು ಹೈಯರ್ ಸೆಕೆಂಡರೀ ಶಾಲೆಯ ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದ ತರಗತಿಗಳಿಗೆ ಮಲೆಯಾಳ ಕಲಿತವರನ್ನು ಶಿಕ್ಷಕರನ್ನಾಗಿ ನೇಮಿಸಲಾಗಿತ್ತು. ಈ ಬಗ್ಗೆ ಪ್ರತಿಭಟನೆ ಬಲಗೊಂಡ ಕಾರಣ ಆದೂರು ಶಾಲೆಯ ಹೊರತಾಗಿ ಇವರಿಗೆ ಹುದ್ಧೆಗೆ ಸೇರ್ಪಡೆಗೊಳ್ಳಲು ಸಾಧ್ಯವಾಗಲಿಲ್ಲ. ಆದೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಪೋಷಕರ ಪ್ರತಿಭಟನೆಯ ಹೊರತಾಗಿಯೂ ಮಲೆಯಾಳಿ ಶಿಕ್ಷಕ ಹುದ್ಧೆಯಲ್ಲಿ ಮುಂದುವರಿಯುತ್ತಿದ್ದಾರೆ. ಇದು ಶಾಲೆಯ ಕನ್ನಡ ತರಗತಿಗೇ ಸಂಚಕಾರವಾಗಿ ಪರಿಣಮಿಸಿದೆ.ಯು 115 ವರ್ಷಗಳ ಹಿಂದೆ ಸ್ಥಾಪನೆಯಾದ ಒಂದು ಸರಕಾರಿ ಶಿಕ್ಷಣ ಸಂಸ್ಥೆ. ಆದರೆ ಸರ್ಕಾರದ ಕೆಲವು ಧೋರಣೆಗಳಿಂದಾಗಿ ಇಲ್ಲಿನ ಕನ್ನಡ ತರಗತಿಗಳಿಗೆ ಸಂಚಕಾರ ಎದುರಾಗಿದೆ.
             ಆದೂರು ಪ್ರದೇಶ ವಾಸಿಗಳು ಬಹುತೇಕ ಮಂದಿ ಕನ್ನಡಿಗರೇ ಆಗಿದ್ದಾರೆ. ಇಲ್ಲಿನ ತರಗತಿಗಳಲ್ಲಿಯೂ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇರಳ ಸರ್ಕಾರದ ಕಡ್ಡಾಯ ಮಲೆಯಾಳ ಕಲಿಕೆ ಮೊದಲಾದ ಧೋರಣೆಯಿಂದಾಗಿ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಲೆಯಾಳ ತರಗತಿಗಳಲ್ಲಿ ಕನ್ನಡ ತರಗತಿಗಳಿಗಿಂತ ಹೆಚ್ಚು  ವಿದ್ಯಾರ್ಥಿಗಳಿದ್ದಾರೆ. ಕನ್ನಡ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ನಡೆಸಲು ಶಿಕ್ಷಕರು ಭಾರೀ ಶ್ರಮ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ ಇರುವಾಗಲೇ ಕನ್ನಡ ತರಗತಿಗೆ ಪಾಠ ಹೇಳಲು ಕನ್ನಡ ಸರಿಯಾಗಿ ತಿಳಿಯದ ಮಲೆಯಾಳಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಇದು ಒಟ್ಟಾರೆಯಾಗಿ ಶಾಲೆಯ ಕನ್ನಡ ತರಗತಿಗಳ ಮೇಲೆ `Áರೀ ಪರಿಣಾಮ ಬೀರಬಹುದು.
                      ಕನ್ನಡ ತಿಳಿಯದ ಶಿಕ್ಷಕರ ನೇಮಕ-
          ಆದೂರು ಪ್ರೌಢಶಾಲೆಯ ಕನ್ನಡ ತರಗತಿಗಳಿಗೆ ಭೌತ ಶಾಸ್ತ್ರ(ಫಿಸಿಕಲ್ ಸಯನ್ಸ್) ಕಲಿಸಲು ಕನ್ನಡ ತಿಳಿಯದ ಶಿಕ್ಷಕರನ್ನು 4 ತಿಂಗಳ ಹಿಂದೆ ನೇಮಿಸಲಾಗಿದ್ದು ಇದರ ವಿರುದ್ಧ ವಿದ್ಯಾರ್ಥಿಗಳು  ಮತ್ತು ಪೋಷಕರು ಪ್ರತಿಭಟನೆಗೆ ಕಾರಣವಾಗಿತ್ತು. ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಆದೇಶದಂತೆ ಕನ್ನಡ ತಿಳಿಯದ ಸುಹಿರಿ.ಎಸ್ ಎಂಬವರನ್ನು ಆದೂರು ಪ್ರೌಢ ಶಾಲೆಗೆ ಪ್ರಸ್ತುತ ವರ್ಗಾವಣೆಗೊಳಿಸಲಾಯಿತು. ಹಾಗೆಯೇ ಇವರು ಆದೂರು ಶಾಲೆಯಲ್ಲಿ ತನ್ನ ವೃತ್ತಿಗೆ ಪುನಃ ಸೇರ್ಪಡೆಗೊಂಡ ನಂತರ ಶಾಲೆ ಕನ್ನಡ ತರಗತಿಗಳ ಮೇಲೆ ಪರಿಣಾಮ ಉಂಟಾಯಿತು. ಕೆಲವು ವಿದ್ಯಾರ್ಥಿಗಳು ಶಾಲೆಯಿಂದ ವರ್ಗಾವಣೆ ಪತ್ರವನ್ನೂ ಪಡೆಯುವ ಸ್ಥಿತಿ ಎದುರಾಗಿದೆ. ಆದರೆ ಇವರು 14-1-2019ರಲ್ಲಿ ಜಿಎಚ್‍ಎಸ್‍ಎಸ್ ಪೈವಳಿಕೆಯಲ್ಲಿ ಪ್ರಥಮ ಬಾರಿಗೆ ಫಿಸಿಕಲ್ ಸಯನ್ಸ್(ಕನ್ನಡ ಮಾಧ್ಯಮ) ಶಿಕ್ಷಕರಾಗಿ ಹುದ್ಧೆಗೆ ಸೇರ್ಪಡೆಗೊಂಡಿದ್ದರು. ಆದರೆ ಕನ್ನಡ ಭಾಷಾ ಪ್ರಾವೀಣ್ಯತೆಯು ಇಲ್ಲದ ಕಾರಣ ಊರವರ ಮತ್ತು ಪೋಷಕರ ಪ್ರತಿಭಟನೆಯ ಫಲವಾಗಿ ಒಂದು ವಾರದ ನಂತರ 6ತಿಂಗಳ ಕಾಲ ವೇತನವಿಲ್ಲದ ರಜೆಯ ಮೇಲೆ ತೆರಳಲು ಇವರಿಗೆ ಆದೇಶ ನೀಡಲಾಯಿತು.
            ಇದೇ ಸಂದರ್ಭದಲ್ಲಿ ಕೋರ್ಟಿನ ಆದೇಶದಂತೆ ಇವರು ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಪಡೆಯುವುದಕ್ಕಾಗಿ ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಹತ್ತು ತಿಂಗಳ ತರಬೇತಿಗೆ ತೆರಳಿದರು. ಆ ಪ್ರಕಾರ ತರಬೇತಿ ಪಡೆದ ಇವರು ಪುನಃ ಈ ಹುದ್ಧೆಗೆ ಮರು ಸೇರ್ಪಡೆಗೆ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಆದೂರು ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ಧೆಗೆ ಈಗ ಪುನಃ ಸೇರ್ಪಡೆಗೊಂಡರು. ಆದರೆ ತರಗತಿಗಳಲ್ಲಿ ಕನ್ನಡ ಕಲಿಯದೆ ಕೇವಲ ಕನ್ನಡ ಭಾಷೆಯ ತರಬೇತಿಯನ್ನು ಪಡೆದು ಬಂದ ಕಾರಣ ಈ ಶಿಕ್ಷಕರ ಬೋಧನೆಯು ವಿದ್ಯಾರ್ಥಿಗಳಿಗೆ ಅಥ್ರ್ಯಸಿಕೊಳ್ಳಲು ಅಸಾಧ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಾಗೆ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ  ಮತ್ತು ಶಿಕ್ಷಣ ಅಕಾರಿಗಳಿಗೆ ಮನವಿಯನ್ನು ನೀಡಿ ಈ ಶಿಕ್ಷಕರನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದರು. ತರಗತಿಯನ್ನು ಸಹಾ ಬಹಿಷ್ಕರಿಸಿದ್ದರು.
                ವಿದ್ಯಾರ್ಥಿಗಳಿಂದ ಧರಣಿ-
      ಮಲೆಯಾಳ ಭಾಷೆಯನ್ನು ಕಲಿತ ಶಿಕ್ಷಕರನ್ನು ನೇಮಿಸಿರುವುದರಿಂದ ಕನ್ನಡ ಮಾಧ್ಯಮ ಮಕ್ಕಳಿಗೆ ಪಾಠಭಾಗವನ್ನು ಅರ್ಥೈಸಲು ಕಷ್ಟವಾಗುತ್ತಿದೆ, ಕೂಡಲೇ ವರ್ಗಾವಣೆ ಮಾಡಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಹೆತ್ತವರು ಕಲೆಕ್ಟರ್ ಹಾಗೂ ಡಿ.ಡಿ ಇ ಅವರನ್ನು ಕಂಡು ತಮಗಾದ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಮನವಿ ಸಲ್ಲಿಸಿದರು ಮತ್ತು ಧರಣಿ ಹೂಡಿದರು. ಆದರೆ ಇವರಿಗೆ ರಕ್ಷಕ ಶಿಕ್ಷಕ ಸಂಘದ ಬೆಂಬಲ ಇರಲಿಲ್ಲ ಎಂಬ ಆರೋಪವಿದೆ.
                          ಮಕ್ಕಳ ಹಕ್ಕುಗಳ ಆಯೋಗದ ಆದೇಶ-
         ಆದೂರು ಶಾಲೆ ಮತ್ತು ಅಂಗಡಿಮೊಗರು ಶಾಲೆಯ ವಿದ್ಯಾರ್ಥಿಗಳು ಈ ಸಮಸ್ಯೆಯ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ನಿಯಮ 2005ರ ಪ್ರಕಾರ ತನಿಖೆ ನಡೆಸಿ ಈ ಶಿಕ್ಷಕನನ್ನು ತರಗತಿ ಬೋಧನೆಯಿಂದ ಬಿಟ್ಟು ಬಿಆರ್‍ಸಿ/ಸಿಆರ್‍ಸಿಗಳಲ್ಲಿ ಉಚಿತವಾದ ಕಡೆಯಲ್ಲಿ ನೇಮಿಸಬೇಕು. ಈ ಶಿಕ್ಷಕರ ಬದಲಿಗೆ ದಿನವೇತನ ಶಿಕ್ಷಕರನ್ನು ಶಾಲೆಯಲ್ಲಿ ನೇಮಿಸಿ, ಈ ಬಗ್ಗೆ 45 ದಿನಗಳ ಒಳಗಾಗಿ ಬಾಲಾವಕಾಶ ಕಮಿಶನ್‍ಗೆ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries