HEALTH TIPS

ನರ್ತಕಿ ಮಲ್ಲಿಕಾ ಸಾರಾಭಾಯಿ ಕೇರಳ ಕಲಾಮಂಡಲಂ ಕುಲಪತಿಯಾಗಿ ನೇಮಕ: ಆದೇಶ ಹೊರಡಿಸಿದ ಸರ್ಕಾರ


            ತಿರುವನಂತಪುರಂ: ನರ್ತಕಿ ಮಲ್ಲಿಕಾ ಸಾರಾಭಾಯ್ ಅವರನ್ನು ಕೇರಳ ಕಲಾಮಂಡಲಂನ ಕುಲಪತಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
             ಸಂಸ್ಕøತಿ ಸಚಿವ ವಿ.ಎನ್.ವಾಸವನ್ ಮಾತನಾಡಿ, ಮಲ್ಲಿಕಾ ಸಾರಾಭಾಯಿ ಅವರು ಕಲೆ, ಸಾಹಿತ್ಯವನ್ನು ಸಮಾಜ ಪರಿವರ್ತನೆಗೆ ಬಳಸಿಕೊಂಡ ಪ್ರತಿಭೆ. ಈ ಹಿನ್ನೆಲೆಯಲ್ಲಿ ಆಯ್ಕೆಮಾಡಲಾಗಿದೆ ಎಂದಿರುವರು.
             ಮಲ್ಲಿಕಾ ಸಾರಾಭಾಯ್ ಪ್ರಸಿದ್ಧ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಮತ್ತು ಗಗನಯಾತ್ರಿ ವಿಕ್ರಮ್ ಸಾರಾಭಾಯ್ ಅವರ ಪುತ್ರಿ. ಮಲ್ಲಿಕಾ ಭರತನಾಟ್ಯ, ಕೂಚಿಪುಡಿ ಮುಂತಾದ ನೃತ್ಯ ಕಲೆಗಳಲ್ಲಿ ಮಿಂಚಿದ್ದಾರೆ. ಅವರು ರಂಗಭೂಮಿ, ಚಲನಚಿತ್ರ, ದೂರದರ್ಶನ, ಬರವಣಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ. 1953 ರಲ್ಲಿ ಗುಜರಾತ್‍ನಲ್ಲಿ ಜನಿಸಿದವರು.
            ಅವರು ಮುಖ್ಯವಾಗಿ ಕಲೆಯನ್ನು ಸಾಮಾಜಿಕ ಪರಿವರ್ತನೆಗಾಗಿ ಬಳಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ನೃತ್ಯ ಕಲಿಯಲು ಆರಂಭಿಸಿದ ಮಲ್ಲಿಕಾ ಇಂದಿಗೂ ಕಲೆಯನ್ನು ಸಾಮಾಜಿಕ ಒಳಗೊಳ್ಳುವಿಕೆಯ ವಸ್ತುವಾಗಿಸಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
            ರಾಜ್ಯಪಾಲರು ಈವರೆಗೆ ಕಲಾಮಂಡಲದ ಕುಲಪತಿಗಳಾಗಿದ್ದರು. ಆದರೆ ಸರ್ಕಾರವು ವಿಸಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರೊಂದಿಗಿನ ಘರ್ಷಣೆಯ ತರುವಾಯ ಅವರನ್ನು ಹೊರಗಿಟ್ಟಿತು. ಇದು ಸನ್ನದು ಪಡೆದ ವಿಶ್ವವಿದ್ಯಾನಿಲಯವಾಗಿರುವುದರಿಂದ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬಹುದು. ಬಳಿಕ ಇದೀಗ ಮಲ್ಲಿಕಾ ಸಾರಾಭಾಯ್ ಅವರನ್ನು ನೇಮಿಸಲಾಯಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries