ತಿರುವನಂತಪುರಂ: ಕೇರಳದ ವಿಶ್ವವಿದ್ಯಾನಿಲಯಗಳಲ್ಲಿ ಶೈಕ್ಷಣಿಕ ಉತ್ಕøಷ್ಟತೆಯನ್ನು ಮರುಸ್ಥಾಪಿಸುವ ಸಲುವಾಗಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅರ್ಹ ವಿಸಿಗಳನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಕುಲಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ವಿಶ್ವವಿದ್ಯಾನಿಲಯಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ವಿಸಿಗಳು ಸಂಪೂರ್ಣ ಅರ್ಹತೆ ಹೊಂದಿರುವುದನ್ನು ಎಂದು ನಾನು ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕೇರಳ ನನ್ನ ವಿರುದ್ಧ ಕಾನೂನು ಸಲಹೆ ಪಡೆಯಲು 45 ಲಕ್ಷ ರೂ.ಖರ್ಚುಮಾಡಿತು. ಈ ಕಾನೂನು ಸಲಹೆಯನ್ನು ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ಸಿಕ್ಕ ಸಲಹೆಯಂತೆ ಯಾಕೆ ನ್ಯಾಯಾಲಯದ ಮೊರೆ ಹೋಗಲಿಲ್ಲ. ಕೆಲವರೊಂದಿಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಏಕೆ ಸಲ್ಲಿಸಿದರು. ಕಾನೂನು ಸಲಹೆ ಪಡೆಯಲು 45 ಲಕ್ಷ ಖರ್ಚು ಮಾಡಿದರೆ ನ್ಯಾಯಾಲಯಕ್ಕೆ ಹೋಗಬೇಕಿತ್ತಲ್ಲವೇ ಎಂದವರು ಪ್ರಶ್ನಿಸಿರುವರು.
ಸರ್ಕಾರಕ್ಕೆ ತನ್ನ ಕೆಲಸಗಳನ್ನು ನಿರ್ವಹಿಸಲು ಆಸಕ್ತಿ ಇಲ್ಲ. ಅವರು ವಿಶ್ವವಿದ್ಯಾಲಯಗಳನ್ನು ನಡೆಸಲು ಬಯಸುತ್ತಾರೆ. ಅಲ್ಲಿ ಸಂಬಂಧಿಕರು ಮತ್ತು ಪಕ್ಷದ ಕಾರ್ಯಕರ್ತರನ್ನು ನೇಮಿಸಿ ಸ್ವಜನಪಕ್ಷಪಾತ ಮಾಡಬಹುದು. ಕಣ್ಣೂರು ವಿಶ್ವವಿದ್ಯಾಲಯದ ವಿಸಿ ವಿರುದ್ಧ ಆರು ತಿಂಗಳಲ್ಲಿ ಹೈಕೋರ್ಟ್ ಎಷ್ಟು ಬಾರಿ ತೀರ್ಪು ನೀಡಿದೆ? ಕಣ್ಣೂರು ವಿಸಿಯ ನಿರ್ಧಾರಗಳನ್ನು ನ್ಯಾಯಾಲಯ ಮೂರಕ್ಕೂ ಹೆಚ್ಚು ಬಾರಿ ರದ್ದುಗೊಳಿಸಿದೆ. ಆತ ನಿತ್ಯ ಕ್ರಿಮಿನಲ್ ಇದ್ದಂತೆ. ಅವನು ವಿದ್ಯಾವಂತನಲ್ಲವೇ? ಹಾಗಾದರೆ ಕಾನೂನನ್ನು ಏಕೆ ಮುರಿಯಬೇಕು? ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅವರನ್ನು ನೇಮಕ ಮಾಡಲಾಗಿದೆ. ನಾನು ವಿವಿಗಳ ನಿತ್ಯ ಚಟುವಟಿಕೆಗಳ ಬಗ್ಗೆ ನೋಡಲು ತೆರಳುವುದಿಲ್ಲ. ಅದು ನನ್ನ ಕೆಲಸವಲ್ಲ. ನಮ್ಮ ವಿಶ್ವವಿದ್ಯಾನಿಲಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ವಿಶ್ವದ ಗೌರವವನ್ನು ಗಳಿಸುತ್ತದೆ. "ಯಾರ ಹಸ್ತಕ್ಷೇಪಗಳೂ ಇಲ್ಲದೆ ವಿಶ್ವವಿದ್ಯಾನಿಲಯಗಳು ವಿಸಿಗಳಿಂದ ಆಡಳಿತ ನಡೆಸಲ್ಪಡುತ್ತವೆ ಎಂದು ನಾನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ" ಎಂದು ರಾಜ್ಯಪಾಲರು ಹೇಳಿದರು.
ಅರ್ಹ ವಿಸಿಗಳನ್ನು ತಕ್ಷಣವೇ ನೇಮಿಸಲಾಗುವುದು: ಸರ್ಕಾರ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿಲ್ಲ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್
0
ಡಿಸೆಂಬರ್ 02, 2022





