HEALTH TIPS

ಎಡನೀರಲ್ಲಿ ದ್ವಿದಿನ ಯಕ್ಷೋತ್ಸವ ಜ.10-11 ರಂದು


            ಬದಿಯಡ್ಕ: ಎಡನೀರು ಶ್ರೀಕೇಶವಾನಂದ ಭಾರತೀ ಶ್ರೀಪಾದಂಗಳ ಪುಣ್ಯ ಸ್ಮರಣಾರ್ಥ ದ್ವಿದಿನ ಯಕ್ಷೋತ್ಸವ ಜ.10 ಹಾಗೂ 11 ರಂದು ಶ್ರೀಮದ್ ಎಡನೀರು ಮಠದ ಪರಿಸರದಲ್ಲಿ ನಡೆಯಲಿದೆ. ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪ್ರಥಮ ದಿನ ಸಂಜೆ 5.30 ರಿಂದ ಶ್ರೀಕೃಷ್ಣ ತುಲಾಭಾರ-ಮೈರಾವಣ ಕಾಳಗ ಹಾಗೂ ವಿರೋಚನ ಕಾಳಗ ಹಾಗೂ ಎರಡನೇ ದಿನ ಶಿವಪಂಚಾಕ್ಷರೀ ಮಹಿಮೆ-ರಕ್ತರಾತ್ರಿ ಆಖ್ಯಾಯಿಕೆಗಳ ಪ್ರದರ್ಶನ ನಡೆಯಲಿದೆ. ಆ.11 ರಂದು ರಾತ್ರಿ 8.30 ರಿಂದ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದರಿಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿರುವರು. ಡಾ.ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ.ಎಂ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ಸರಪಾಡಿ ಅಶೋಕ ಶೆಟ್ಟಿ ಅವರನ್ನು ಅಭಿನಂದಿಸಲಾಗುವುದು. ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries