HEALTH TIPS

ಶಬರಿಮಲೆ: ಮಲಗಲೂ ಜಾಗವಿಲ್ಲ; 10 ಹಾಸಿಗೆಯ ಕೊಠಡಿಗಳಲ್ಲಿ 30 ಮಂದಿ: ತಾತ್ಕಾಲಿಕ ಸಿಬ್ಬಂದಿಯ ಜೀವನ ಶೋಚನೀಯ



      ಶಬರಿಮಲೆ: ಶಬರಿಮಲೆಯ ಹಂಗಾಮಿ ನೌಕರರನ್ನು ಮನುಷ್ಯರು ಎಂಬ ನೆಲೆಯಲ್ಲೂ ದೇವಸ್ವಂ ಮಂಡಳಿ ಪರಿಗಣಿಸಿಲ್ಲ. ಮಲಗಲು ಸ್ವಚ್ಛ ವಾತಾವರಣವನ್ನೂ ಕಲ್ಪಿಸಲು ದೇವಸ್ವಂ ಮಂಡಳಿ ವಿಫಲವಾಗಿದೆ ಎಂದು ದೂರಲಾಗಿದೆ.
           ಶಬರಿಮಲೆಯ ವಿವಿಧ ಪ್ರದೇಶಗಳಲ್ಲಿ ದಿನಗೂಲಿಯಲ್ಲಿ ದುಡಿಯುವ ಸುಮಾರು 2,000 ಹಂಗಾಮಿ ಕಾರ್ಮಿಕರ ಬದುಕು ನರಕಸದೃಶವಾಗಿದೆ. ಎಂಟು ಗಂಟೆಗಳ ಕೆಲಸಕ್ಕೆ ಕೇವಲ 420 ರೂ.ವೇತನ ನೀಡಲಾಗುತ್ತಿದೆ.
        ಬಹುತೇಕರು 800 ರಿಂದ 1000 ರೂಪಾಯಿ ಸಂಬಳ ಪಡೆಯುವ ತಮ್ಮ ಊರಿಂದ  ತಮ್ಮ ಉದ್ಯೋಗಗಳಿಗೆ ತಾತ್ಕಾಲಿಕ ರಜೆ ನೀಡಿ ಹಲವು ವರ್ಷಗಳಿಂದ ಶಬರಿಮಲೆಯಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಬಹುತೇಕರು ತಮ್ಮ ಸಮಯವನ್ನು ಅಯ್ಯಪ್ಪ ಸೇವೆಗೆ ಮೀಸಲಿಟ್ಟಿದ್ದಾರೆ. ದೇವಸ್ವಂ ಮಂಡಳಿ ಹಣ ನೀಡದೆ ಸತಾಯಿಸುತ್ತಿದೆ. ಹಾಸಿಗೆ ಸೌಲಭ್ಯ ಕೂಡಾ ನೀಡಬೇಕು ಎಂದು ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.
          ಹತ್ತು ಜನ ಮಲಗಬಹುದಾದ ಚಿಕ್ಕ ಕೋಣೆಗಳಲ್ಲಿ ಮೂವತ್ತು ಜನ ಕೆಲಸಗಾರರು ತುಂಬಿ ತುಳುಕುತ್ತಾರೆ. ಇಂತಹ ವಾತಾವರಣದಲ್ಲಿ ಉಳಿದುಕೊಳ್ಳುವುದರಿಂದ ಹಲವರು ಜ್ವರದಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ದಿನದ ಕೂಲಿಯನ್ನು 400 ರೂ.ನಿಂದ 420 ರೂ.ಗೆ ಹೆಚ್ಚಿಸಲಾಗಿತ್ತು. ಉಳಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರತಿ ವರ್ಷ ವೇತನ ಹೆಚ್ಚಳವಾಗುತ್ತಿದ್ದರೂ ಸರಕಾರ ಹಾಗೂ ದೇವಸ್ವಂ ಮಂಡಳಿ ತಮ್ಮ ವಿಷಯದಲ್ಲಿ ಘೋರ ಅನ್ಯಾಯ ಮಾಡುತ್ತಿದೆ ಎಂದು ಕಾರ್ಮಿಕರು ಹೇಳಿರುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries