ಪೆರ್ಲ: ಪೆರ್ಲದ ಸಾಹಿತ್ತಿಕ, ಸಾಂಸ್ಕøತಿಕ ಸಂಘಟನೆಯಾದ ಸವಿಹೃದಯದ ಕವಿಮಿತ್ರರು ವೇದಿಕೆ ಹಾಗೂ ಪಾಣಾಜೆ ಸಮತಾ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಜ.26 ರಂದು ಗುರುವಾರ ಅಪರಾಹ್ನ 2 ರಿಂದ ಆರ್ಲಪದವು ಅಭಿ ಬೋರ್ ವೆಲ್ಸ್ ಕಚೇರಿ ಪರಿಸರದಲ್ಲಿ ಕವಿಗಷ್ಠಿ ಹಾಗೂ ಕೃತಿ ಸಮೀಕ್ಷೆ ಸಮಾರಂಭ ಆಯಜಿಸಲಾಗಿದೆ.
ಸಾಹಿತಿ ಉದಯರವಿ ಕಂಬ್ರಾಜೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಹಿರಿಯ ಸಾಹಿತಿ ನಾರಾಯಣ ಭಟ್ ಕಾಕೆಕಚ್ಚಿ ಉದ್ಘಾಟಿಸುವರು. ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಉಪಸ್ಥಿತರಿರುವರು. ಈ ಸಂದರ್ಭ ಕವಿ ಬಾಲಕೃಷ್ಣ ಬೇರಿಕೆ ಅವರ ಹೆಸರಿರದ ಹೂವು ಹನಿಗವನ ಸಂಕಲನ ಕೃತಿಯ ಬಗ್ಗೆ ಕವಯಿತ್ರಿ ದಿವ್ಯಾ ಗಟ್ಟಿ ಪರಕ್ಕಿಲ ಸಮೀಕ್ಷೆ ನಡೆಸುವರು.
ಬಳಿಕ ನಡೆಯುವ ಕವಿಗಷ್ಠಿಗೆ ಹಿರಿಯ ಸಾಹಿತಿ ಹರೀಶ್ ಪೆರ್ಲ ಚಾಲನೆ ನೀಡುವರು. ನಾಡಿನ ಯುವ ಸಾಹಿತಿಗಳು ಗಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸುವರು.
ಸವಿಹೃದಯದ ಕವಿಮಿತ್ರರಿಂದ ಕವಿಗೋಷ್ಠಿ-ಕೃತಿ ಸಮೀಕ್ಷೆ 26 ರಂದು
0
January 19, 2023